ತುಮಕೂರಿನಲ್ಲಿ ರೋಗಿಯ  ಆಟಕ್ಕೆ ಬೆಚ್ಚಿದ ಸಾರ್ವಜನಿಕರು

ತುಮಕೂರಿನಲ್ಲಿ ರೋಗಿಯ  ಆಟಕ್ಕೆ ಬೆಚ್ಚಿದ ಸಾರ್ವಜನಿಕರು

 

ತುಮಕೂರು_ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಮಾನಸಿಕ ಸ್ಥಿಮಿತ ಕಳೆದುಕೊಂಡು ಆಸ್ಪತ್ರೆಯಲ್ಲಿ ಸಾರ್ವಜನಿಕರು ಹಾಗೂ ಹೋಂ ಗಾರ್ಡ್ಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

 

 

ವ್ಯಕ್ತಿಯೊಬ್ಬ ಇತ್ತೀಚಿಗೆ ವಿಷ ಕುಡಿದ ಕಾರಣ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ನೀಡುವ ಸಮಯದಲ್ಲಿ ವ್ಯಕ್ತಿಯೊಬ್ಬ ಶಾಕ್ಗೆ ಒಳಗಾಗಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡು ಆಸ್ಪತ್ರೆಯ ಒಳಗಡೆ ಇರಬೇಕಾದ ರೋಗಿ ಆಚೆ ಬಂದು ಕುಳಿತು ಆಸ್ಪತ್ರೆಯ ಒಳಗೆ ಹೋಗಲು ನಿರಾಕರಿಸಿದ್ದು ಆತನನ್ನು ಒಳಗಡೆ ಕರೆದುಕೊಂಡು ಹೋಗಲು ರೋಗಿಯ ಪಾಲಕರು , ಹೋಂಗಾರ್ಡ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮುಂದಾದರು ಆದರೆ ಆತ ಎಲ್ಲರ ಮೇಲೆ ಕಲ್ಲು ತೂರಲು ಮುಂದಾದ ಘಟನೆ ನಡೆದಿದೆ.

 

 

ಇನ್ನು ರೋಗಿಯೂ ಆಸ್ಪತ್ರೆಯ ಒಳಹೋಗಲು ನಿರಾಕರಿಸಿದ್ದು ಕೈಯಲ್ಲಿ ಕಲ್ಲು ಹಿಡಿದು ತನ್ನ ಬೆನ್ನಿಗೆ  ಅಳವಡಿಸಿದ್ದ ಪೈಪ್ ಅನ್ನು  ಕಲ್ಲಿನಿಂದ ಜಜ್ಜಿ ಕೈಯಲ್ಲಿದ್ದ ಸೂಜಿಯನ್ನು ತೆಗೆದುಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ.

 

 

ಕೂಡಲೇ ಇದನ್ನು ಗಮನಿಸಿದ ಸಾರ್ವಜನಿಕರು ರೋಗಿಯನ್ನು ರಕ್ಷಿಸಿ ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋದ ಘಟನೆ ವರದಿಯಾಗಿದೆ.

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version