ಮಾರ್ಚ್ 22ರಂದು ತುಮಕೂರು ನಗರಕ್ಕೆ ಪುನೀತ್ ರಾಜಕುಮಾರ್ ಭೇಟಿ

 

ಕನ್ನಡದ ಬಹು ನಿರೀಕ್ಷಿತ ’ಯುವರತ್ನ’ ಚಲನಚಿತ್ರದ ಪ್ರಮೋಷನ್‌ಗಾಗಿ ದಿನಾಂಕ ೨೨-೦೩-೨೦೨೧ ಸೋಮವಾರದಂದು ಸಂಜೆ ೪.೦೦ ಗಂಟೆಗೆ ಕನ್ನಡದ ಖ್ಯಾತ ನಟರಾದ ’ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್’ರವರು ಯುವರತ್ನ ಚಿತ್ರ ತಂಡದೊಂದಿಗೆ ತುಮಕೂರಿನ ಎಸ್.ಐ.ಟಿ. ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಚಿತ್ರದ ಪ್ರಮೋಷನ್‌ಗಾಗಿ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಪುನೀತ್‌ರಾಜ್‌ಕುಮಾರ್‌ರವರ ಅಪಾರ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯನ್ನು ಹೊಂದಿರುತ್ತೇವೆ. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಚಲನಚಿತ್ರ ನಟಿ ಸಾಯೀಷಾ (ತೆಲಗು ಅಖಿಲ್ ಸಿನಿಮಾ ಖ್ಯಾತಿಯ), ನಿರ್ಮಾಪಕರಾದ ಕಾರ್ತಿಕ ಗೌಡ ಹಾಗೂ ಚಿತ್ರ ತಂಡದ ಹಲವಾರು ಜನರು ಭಾಗವಹಿಸಲಿದ್ದಾರೆ ಎಂದು ಡಾ. ರಾಜ್ ಸೇನೆ ಸಮಿತಿಯ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ :- ಈ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಕನ್ನಡ ಚಲನಚಿತ್ರ ಪ್ರೇಮಿಗಳು, ಅಭಿಮಾನಿಗಳು, ಸಾರ್ವಜನಿಕರು ಕೋವಿಡ್ ೧೯ ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕೆಂದು  ಶಿವರಾಜ್, ಅಪ್ಪು ಯುವ  ಬ್ರಿಗೇಡ್ ನ  ದೀಕ್ಷಿತ್, ಅಮಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version