ಕಲ್ಬುರ್ಗಿ ವಕೀಲ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದ ವಕೀಲರು.

ಕಲ್ಬುರ್ಗಿ ವಕೀಲ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದ ವಕೀಲರು.

 

 

ತುಮಕೂರು – ಕಲ್ಬುರ್ಗಿಯಲ್ಲಿ ನಡೆದ ವಕೀಲರಾದ ಈರಣ್ಣ ಗೌಡ ಅವರ ಹತ್ಯೆ ಹಾಗೂ ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆಯನ್ನು ಖಂಡಿಸಿ ತುಮಕೂರು ಜಿಲ್ಲಾ ವಕೀಲರ ಸಂಘ ಪ್ರತಿಭಟನೆ ನಡೆಸಿತು.

ಶುಕ್ರವಾರ ನಡೆದ ಕಾರ್ಯಕಾರಿ ಮಂಡಳಿ ಸಭೆಯ ನಿರ್ಣಯದಂತೆ ಕಾರ್ಯಕಲಾಪಗಳಿಂದ ಹೊರಗುಳಿದು ವಕೀಲರ ರಕ್ಷಣಾ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಾಸು ಮಾಡಬೇಕೆಂಬ ಒತ್ತಾಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಕೀಲರ ಸಂಘ ನೀಡಿತು.

 

 

 

 

 

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ, ಉಪಾಧ್ಯಕ್ಷರಾದ ಶಿವಶಂಕರಯ್ಯ, ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಜೊತೆ ಕಾರ್ಯದರ್ಶಿ ಪಾಲಾಕ್ಷಯ್ಯ ಸಿ., ಖಜಾಂಚಿ ಕೆ.ಎಲ್.ಭಾರತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಎಸ್.ಸಂದೀಪ್, ಎಂ.ಬಿ.ನವೀನ್ ಕುಮಾರ್, ಎಂ.ಬಿ.ಗುರುಪ್ರಸಾದ್, ಶಿವಕುಮಾರ ಸ್ವಾಮಿ ಸಿ., ಜನಾರ್ಧನ ಟಿ.ಎಸ್., ಮಂಜುಳಾ ಹೆಚ್.ಎನ್., ಮೋಹನ್ ಎಸ್. ಶಿವಕುಮಾರ್ ಮೇಷ್ಟ್ರುಮನೆ, ಹಿಮಾನಂದ್, ಚಂದ್ರಣ್ಣ, ಮಲ್ಲಿಕಾರ್ಜುನ್, ಗಣೇಶ್ ಎಂ. ಎಸ್.ಪದ್ಮನಾಭ್ ಇನ್ನಿತರೇ ಅನೇಕ ವಕೀಲರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version