ಮದುವೆ ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಯುವಕರು.

ಮದುವೆ ಮಾಡಿಸಲು  ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಯುವಕರು.

 

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಲಕ್ಕೊಂಡನಹಳ್ಳಿ ಹಾಗೂ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಯುವಕರು ನಮಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಹಾಗಾಗಿ ದಯಮಾಡಿ ನಮಗೆ ಮದುವೆ ಮಾಡಿಸಿ ಎಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

 

ಲಕ್ಕ ಗೊಂಡನಹಳ್ಳಿ ಹಾಗೂ ತಿಮ್ಲಾಪುರ ಗ್ರಾಮದ ರೈತಾಪಿ ವರ್ಗದ ಯುವಕರಿಗೆ ವಿವಾಹವಾಗಲು ವಧುಗಳು ಸಿಗುತ್ತಿಲ್ಲ ಆದಕಾರಣ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದ್ದಾರೆ.

 

ಪತ್ರದ ಸಾರಾಂಶ

ಮೇಲ್ಕಂಡ ಎರಡು ಗ್ರಾಮಗಳ ರೈತಾಪಿ ವರ್ಗದ ಗಂಡುಮಕ್ಕಳಿಗೆ ವಿವಾಹವಾಗಲು ವಧುಗಳು ದೊರೆಯುತ್ತಿಲ್ಲ ಕಾರಣ ನಾವು ಮೂಲತಹ ರೈತಾಪಿ ಕೆಲಸಗಳನ್ನು ಮಾಡುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಯಾವುದೇ ಯುವಕರನ್ನು ಮದುವೆಯಾಗಲು ಹೆಚ್ಚುತ್ತಿಲ್ಲ ಆದಕಾರಣ ಸರ್ಕಾರದ ಮಟ್ಟದಲ್ಲಿ ಗಂಭೀರವಾ ಗಿ ಪರಿಗಣಿಸಿ ಈ ಸಮಸ್ಯೆ ಬಗೆಹರಿಸಬೇಕು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಬರೆದು ಸುಮಾರು 10 ಜನ ಯುವಕರು ಸಹಿಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version