ತುಮಕೂರಿನಲ್ಲಿ ಬೀಕರ ರಸ್ತೆ ಅಪಘಾತ ಮೂರು ಮಂದಿ ಸಾವು.

ತುಮಕೂರಿನಲ್ಲಿ ಬೀಕರ ರಸ್ತೆ ಅಪಘಾತ ಮೂರು ಮಂದಿ ಸಾವು.

 

ತುಮಕೂರಿನ ಹೆಗ್ಗೆರೆ ಬಳಿ ಖಾಸಗಿ ಬಸ್ ಹಾಗೂ ಕ್ಯಾಂಟರ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಸ್ಥಳದಲ್ಲೇ ಓರ್ವ ಮಹಿಳೆ ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಚಿಕ್ಕನಾಯಕನಹಳ್ಳಿ ಮೂಲದ ರೈತರು ಎಂದು ತಿಳಿದುಬಂದಿದೆ . ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆಯುವಲ್ಲಿ ಹರಸಾಹಸ ಪಡುವಂತಾಯಿತು. ಮೃತಪಟ್ಟವರನ್ನು ಚಿಕ್ಕನಾಯಕನಹಳ್ಳಿಯ ಕವಿತಾ (38), ದರ್ಶನ್ (22), ಚಿಕ್ಕನಾಯಕನಹಳ್ಳಿ ಬ್ಯಾಡರಹಳ್ಳಿಯ ದಿವಾಕರ್ (26), ತುರುವೇಕೆರೆಯ ಕೃಷ್ಣಮೂರ್ತಿ(45) ಎಂದು ತಿಳಿದುಬಂದಿದೆ, ತುಮಕೂರಿನ ಮಾರುಕಟ್ಟೆಗೆ ತರಕಾರಿಯನ್ನು ಹಾಕಿ ನಂತರ ತಮ್ಮ ಊರುಗಳಿಗೆ ಹಿಂತಿರುಗುವಾಗ ಅಪಘಾತ ನಡೆದಿದೆ. ಮೃತದೇಹಗಳನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version