ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಚಾಕ್ಲೇಟ್ ಹಾಗೂ ಮಿಲ್ಲೆಟ್ಸ್ ವಿತರಣೆ.

 

ತುಮಕೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ಬೆಂಗಳೂರಿನ ಯೋಗ ಬಾರ್ ಸ್ಪ್ರೌಟ್ ಲೈಫ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕೆಂಗೇರಿ, ಬೆಂಗಳೂರು ಹಾಗೂ ಯೋಗ ಬಾರ್ ನ ಪ್ರವೀಣ್ ಹತ್ತಿಇವರ ವತಿಯಿಂದ ಪೌರಕಾರ್ಮಿಕರು, ಬಡ ಮಕ್ಕಳು, ಅಲೆಮಾರಿಗಳು ಹಾಗೂ ಅನಾಥ ಮಕ್ಕಳಿಗೆ ನೆರವಿನ ಸಹಾಯಹಸ್ತ ನೀಡುವ ಸಲುವಾಗಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಚಾಕೊಲೇಟ್ ಹಾಗೂ ಮಿಲ್ಲೆಟ್ ಪೌಡರ್ ಬಿಸ್ಕೆಟ್ ವಿತರಣಾ ಕಾರ್ಯಕ್ರಮ ನಡೆಯಿತು.

 

ಇನ್ನು ಕಾರ್ಯಕ್ರಮದಲ್ಲಿ ಕಂಪನಿ ವತಿಯಿಂದ ನೀಡಲಾಗಿರುವ ಕಿಟ್ ಅನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮಕ್ಕಳಿಗೆ ಹಂಚುವ ಗುರಿ ಹೊಂದಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್ ರವರು ತಿಳಿಸಿದರು.

 

ಯೋಗಬಾರ್ ಸಂಸ್ಥೆಯ ಸದಸ್ಯರಾದ ಯಶಸ್ವಿನಿ ಮಾತನಾಡಿ ಕರೋನಾ ಮೂರನೆ ಅಲೆ ಮಕ್ಕಳಿಗೆ ಅಪಾಯ ತಂದೊಡ್ಡಲಿದೆ ಇಂತಹ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಚಾಕೊಲೇಟ್ ಹಾಗೂ ಮಿಲ್ಲೆಟ್ ಪೌಡರ್ ಮಕ್ಕಳಿಗೆ ಸಾಕಷ್ಟು ಸಹಕಾರಿಯಾಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಾನಿಕ ಆಯುಕ್ತರಾದ ವೇಣುಗೋಪಾಲ್ ಕೃಷ್ಣ ಮಾತನಾಡಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಕಿಟ್ ದಾನಿಗಳಾದ ಯೋಗ ಬಾರ್ ಸಂಸ್ಥೆಯ ಪ್ರವೀಣ್ ಹತ್ತಿ ಹಾಗೂ ಎಸ್ ಕೆ ಪಿ ಡಾನ್ ಸೆಂಟರ್ ನ ಜೆ ಕೃಷ್ಣನ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

 

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾದ ಗಿರಿಜಾ ಧನಿಯಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಈಶ್ವರಯ್ಯ, ಆಂಜನಪ್ಪ, ಸ್ಥಳೀಯ ಸಂಸ್ಥೆಯ ಎಡಿಸಿ ಗಳಾದ ರಮೇಶ್ ಬಾಬು, ಶಿವಕುಮಾರ್, ಬಿ ಎಸ್ ದಯಾನಂದ, ಮಹೇಶ್ ಕುಮಾರ್ ಗುಡಿ ,ಸಿದ್ದಪ್ಪ ,ಸುದೇಶ್ ಕುಮಾರ್ ಹಾಜರಿದ್ದರು. ಇನ್ನು ಕಾರ್ಯಕ್ರಮದಲ್ಲಿ ರಮೇಶ್ ಸ್ವಾಗತಿಸಿದರು, ಪ್ರಾಸ್ತಾವಿಕ ನುಡಿಯನ್ನು ಟಿ ಎಸ್ ರಮೇಶ್ ಆಡಿದರು, ವಂದನಾರ್ಪಣೆ ಸುದೇಶ್ ಕುಮಾರ್ ಹಾಗೂ ನಿರೂಪಣೆ ಬಿ ಎಸ್ ದಯಾನಂದಸ್ವಾಮಿ ನಿರ್ವಹಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version