ಸಚಿವ ಸಂಪುಟದಿಂದ ಮಾಧುಸ್ವಾಮಿ ಅವರನ್ನು ಕೈಬಿಟ್ಟರೆ ಎಲ್ಲ ರೀತಿಯಲ್ಲೂ ತುಂಬಲಾರದ ನಷ್ಟ – ಶಾಸಕ ಡಿಸಿ ಗೌರಿಶಂಕರ್

ಸಚಿವ ಸಂಪುಟದಿಂದ ಮಾಧುಸ್ವಾಮಿ ಅವರನ್ನು ಕೈಬಿಟ್ಟರೆ ಎಲ್ಲ ರೀತಿಯಲ್ಲೂ ತುಂಬಲಾರದ ನಷ್ಟ – ಶಾಸಕ ಡಿಸಿ ಗೌರಿಶಂಕರ್

 

ತುಮಕೂರು

ನೂತನ ಸಚಿವ ಸಂಪುಟದಲ್ಲಿ ಜೆ.ಸಿ. ಮಾಧುಸ್ವಾಮಿಯವರಿಗೆ ಅವಕಾಶ ನೀಡದಿದ್ದಲ್ಲಿ ಅದು ಎಲ್ಲ ರೀತಿಯಲ್ಲೂ ತುಂಬಲಾರದ ನಷ್ಟ ಎಂದು ತುಮಕೂರು  ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅಭಿಪ್ರಾಯಪಟ್ಟರು. ಅವರು ತಾಲ್ಲೋಕಿನ ಅಸಲೀಪುರದಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಚಿವ ಮಾಧುಸ್ವಾಮಿಯವರನ್ನು ತೆಗೆದುಕೊಳ್ಳಬೇಕು. ಮಾಧುಸ್ವಾಮಿಯವರು ಉತ್ತಮ ಸಂಸದೀಯ ಪಟುವಾಗಿದ್ದು, ಯಡಿಯೂರಪ್ಪನವರ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿ ವಿರೋಧ ಪಕ್ಷವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಂಡವರು ಅವರು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೇ ಜಿಲ್ಲೆಯಲ್ಲಿ ಪ್ರತಿಯೊಬ್ಬರನ್ನೂ ಸಮಾನ ರೀತಿಯಲ್ಲಿ ಕಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಸೇವೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅವಶ್ಯಕವಾಗಿದ್ದು ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟರೆ ಅದು ರಾಜ್ಯಕ್ಕೇ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟರು‌.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version