ಮೆ 1ರಂದು ಜ್ಯೋತಿ ಗಣೇಶ್ ಅಭಿಮಾನಿ ಬಳಗ ದಿಂದ ತುಮಕೂರು ನಗರ ಶಾಸಕರ ಹುಟ್ಟುಹಬ್ಬ ಆಚರಣೆ.

 

ತುಮಕೂರು – ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಹುಟ್ಟುಹಬ್ಬವನ್ನು ಅನೇಕ ರೀತಿಯ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಲು ಜ್ಯೋತಿಗಣೇಶ್ ಅಭಿಮಾನಿ ಬಳಗ ಚಿಂತನೆ ನಡೆಸಿದೆ ಎಂದು ಮುಖಂಡ ರಾದ ಜಗದೀಶ್ ತಿಳಿಸಿದರು.

 

 

ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇ ೧ ರಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ೪೮ನೇ ಹುಟ್ಟುಹಬ್ಬದ ನಿಮಿತ್ತ ವಿವಿಧ ರೀತಿಯ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

 

 

ಸುಮಾರು ೫೦ಕ್ಕೂ ಹೆಚ್ಚು ವಿಕಲಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣೆ ಸುಮಾರು ೧೨೦೦ಕ್ಕೂ ಹೆಚ್ಚು ಅಸಂಗಟಿತ ಕಾರ್ಮಿಕರಿಗೆ ಗುರುತಿನ ಕಾರ್ಡ್ ವಿತರಣೆ, ೧ ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತç ನೀಡಿಕೆ, ೫೦೦ಕ್ಕೂ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ದಿವಂಗತ ನಟ ಪುನೀತ್ ರಾಜ ಕುಮಾರ್ ಅವರ ಹೆಸರಿನಲ್ಲಿ ನೇತ್ರದಾನಕ್ಕೆ ಸಹಿ ಹಾಕುವ ಶಿಬಿರ ಮತ್ತು ರಕ್ತದ ಗುಂಪು ಪರೀಕ್ಷೆ, ೬೦ ವರ್ಷ ಮೇಲ್ಪಟ್ಟ ವರಿಗೆ ಮತ್ತು ೨ನೇ ಡೋಸ್ ಲಸಿಕೆ ಪಡೆದು ೩ ತಿಂಗಳಾದವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

 

 

ನಗರದ ಹೆಸರಾಂತ ದೇವಾಲಯ ಗಳು ಮತ್ತು ಎಲ್ಲ ವಾರ್ಡ್ಗಳಲ್ಲಿರುವ ದೇವಾಲಯಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದು, ಕೇಕ್, ಹಾರ ಹಾಕುವುದು, ಶಾಲು ಹೊದಿ ಸುವುದು ಇತ್ಯಾದಿ ಆಡಂಬರವಿಲ್ಲದೆ ಸಾಮಾಜಿಕ ಸೇವೆಗಳಿಗೆ ಮಾತ್ರ ಸೀಮಿತ ಗೊಳಿಸಿ ಹುಟ್ಟುಹಬ್ಬ ಆಚರಿಸುವುದಾಗಿ ತಿಳಿಸಿದರು. ಅಭಿಮಾನಿ ಬಳಗದ ಹನುಮಂತ ರಾಯಪ್ಪ, ಶಂಕರ್, ಮನೋ ಹರಗೌಡ, ಅಣ್ಣೆತೋಟ ಶ್ರೀನಿವಾಸ್, ಜಯಪುರ ಮಂಜುನಾಥ್, ಬಂಬು ಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version