ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣದ ವೇಳೆ ವೇದಿಕೆಯಲ್ಲೆ ಭಾವುಕನಾದ ಕಾರ್ಯಕರ್ತ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣದ ವೇಳೆ ವೇದಿಕೆಯಲ್ಲೆ ಭಾವುಕನಾದ ಕಾರ್ಯಕರ್ತ.

 

ತುಮಕೂರು_ಗುರುವಾರ ತುಮಕೂರು ತಾಲೂಕಿನ ಹೆಬ್ಬುರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನತಾ ಜಲದಾರೆ ಸಮಾವೇಶದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ವೇದಿಕೆಯಲ್ಲಿ ಭಾವುಕನಾದ ಪ್ರಕರಣಕ್ಕೆ ವೇದಿಕೆ ಸಾಕ್ಷಿಯಾಗಿದೆ.

 

 

ಇನ್ನು ವೇದಿಕೆಯಲ್ಲಿ ಕುಮಾರಸ್ವಾಮಿಯವರು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ರವರು ಹಗಲಿರುಳು ಎನ್ನದೆ ತುಮಕೂರು ತಾಲೂಕಿನಾದ್ಯಂತ ಯುವಕರ ಪಡೆಯನ್ನು ಕಟ್ಟಿಕೊಂಡು ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಾ ತಾಲೂಕಿನಾದ್ಯಂತ ಮನೆ ಮಗನಾಗಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ ಭಾಷಣದ ವೇಳೆ ಅದೇ ವೇದಿಕೆಯಲ್ಲಿ ನಿಂತಿದ್ದ ಕಾರ್ಯಕರ್ತನೊಬ್ಬ ಕಣ್ಣೀರು ಹಾಕುತ್ತಾ ವೇದಿಕೆಯಲ್ಲಿ ನಿಂತಿದ್ದು ಕ್ಯಾಮೆರಾ ಕಣ್ಣಿನಲ್ಲಿ ಸರಿಯಾಗಿದೆ.

 

 

ಇನ್ನು ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು ಮುಂದಿನ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ಅವರಿಗೆ ಸಚಿವ ಸ್ಥಾನ ನೀಡುವ ಘೋಷಣೆಯನ್ನು ಸಹ ವೇದಿಕೆಯಲ್ಲಿ ಮಾಡಿದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version