ಬೆಂಗಳೂರಿನ ಕೊರೋನ ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಪರ್ಯಾಯವಾದ ತುಮಕೂರು ಚಿತಾಗಾರ. 

 

 

 

ಬೆಂಗಳೂರಲ್ಲಿ ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಈವರೆಗೆ 16ಕ್ಕೂ ಹೆಚ್ಚು ಶವಗಳನ್ನು ತುಮಕೂರು ನಗರದ ಗಾರ್ಡನ್​​ ರಸ್ತೆಯಲ್ಲಿರುವ ಶವಾಗಾರದಲ್ಲಿ ದಹನ ಮಾಡಲಾಗಿದೆ.

 

ತುಮಕೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವಿಳಂಬವಾದರೆ ಅವರ ಸಂಬಂಧಿಕರು ತುಮಕೂರಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.

ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಇದುವರೆಗೂ 16ಕ್ಕೂ ಹೆಚ್ಚು ಶವಗಳನ್ನು ತುಮಕೂರು ನಗರದ ಗಾರ್ಡನ್​​ ರಸ್ತೆಯಲ್ಲಿರುವ ಶವಾಗಾರದಲ್ಲಿ ದಹನ ಮಾಡಲಾಗಿದೆ. ಬೆಂಗಳೂರು-ತುಮಕೂರು ನಡುವೆ ಸುಮಾರು 1.45 ಗಂಟೆ ಪ್ರಯಾಣವಿದ್ದು, ಸುಲಭವಾಗಿ ಮೃತದೇಹಗಳನ್ನು ತುಮಕೂರಿಗೆ ತರಬಹುದಾಗಿದೆ.ಬೆಂಗಳೂರಲ್ಲಿ ಮೃತಪಟ್ಟ ಕೋವಿಡ್ ಸೋಂಕಿತರಿಗೆ ತುಮಕೂರಲ್ಲಿ ಅಂತ್ಯಕ್ರಿಯೆಅಲ್ಲದೆ ತುಮಕೂರಿನ ಬಹುತೇಕ ಸೋಂಕಿತರು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಅಂತಹ ಶವಗಳನ್ನು ಸಹ ತುಮಕೂರು ನಗರಕ್ಕೆ ತಂದು ಅಂತ್ಯಕ್ರಿಯೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version