ಯುವ ಕಾಂಗ್ರೆಸ್ ವತಿಯಿಂದ ಕೇಸರಿ ಶಾಲು ಧರಿಸಿ ಶ್ರೀ ರಾಮನವಮಿ ಆಚರಣೆ.

ಯುವ ಕಾಂಗ್ರೆಸ್ ವತಿಯಿಂದ ಕೇಸರಿ ಶಾಲು ಧರಿಸಿ ಶ್ರೀ ರಾಮನವಮಿ ಆಚರಣೆ.

ತುಮಕೂರು_ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ ಮಠರವರ ನೇತೃತ್ವದಲ್ಲಿ

ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಇಂದು ತುಮಕೂರಿನ ಭದ್ರಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಮಜ್ಜಿಗೆ ,ಪಾನಕ ಹಾಗೂ ಕೋಸಂಬರಿ ಹಂಚಿ ವಿಶೇಷವಾಗಿ ಶ್ರೀರಾಮನವಮಿ  ಆಚರಿಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ ಮಾತನಾಡಿ ಇನ್ನು ನಮ್ಮ ಯುವ ಕಾಂಗ್ರೆಸ್ ಘಟಕದ ವತಿಯಿಂದ ಹಿಂದೂ-ಮುಸ್ಲಿಂ ಎನ್ನದೆ ಎಲ್ಲ ಧರ್ಮ ಹಾಗೂ ಜನಾಂಗದ ಎಲ್ಲರೂ ಸೇರಿ ವಿಶೇಷವಾಗಿ ಶ್ರೀ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

 

ಇನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹ ಎಲ್ಲ ಜಾತಿ ಧರ್ಮದ ಜನರೊಂದಿಗೆ ಇದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಮಾದರಿ ಎಂದರು.

 

ಇನ್ನು ಕಾರ್ಯಕ್ರಮದಲ್ಲಿ ನಮ್ಮ ಮುಸಲ್ಮಾನ ಬಂಧುಗಳು ವಿಶೇಷವಾಗಿ ಮಜ್ಜಿಗೆ ಹಾಗೂ ಪಾನಕವನ್ನು ಹಂಚುತ್ತಿರುವುದು ನಿಜಕ್ಕೂ ಸಂತೋಷದ ವಿಷಯ ಇನ್ನೂ ರಾಜ್ಯದಲ್ಲಿ ದಿನನಿತ್ಯ ಒಂದಲ್ಲ ಒಂದು ವಿಚಾರದಲ್ಲಿ ಧರ್ಮಗಳನ್ನು ಮುಂದೆ ತಂದು ರಾಜಕೀಯ ಮಾಡುವಲ್ಲಿ ನಿರತರಾಗಿದ್ದಾರೆ ಆದರೆ ಇಂದು ನಮ್ಮ ಮುಸಲ್ಮಾನ ಬಂಧುಗಳೇ ನಿಂತು ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸುತ್ತಿರುವುದು ಸಂತೋಷದ ಸಂಗತಿ ಎಂದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಘಟಕದ ರಾಜ್ಯ ಕಾರ್ಯದರ್ಶಿ ಇಲಿಯಾಸ್ ಮಾತನಾಡಿ ಹಿಂದು ಹಾಗು ಮುಸಲ್ಮಾನ ಬಂಧುಗಳು ಒಂದೇ ಮನೆಯ ಅಣ್ಣತಮ್ಮಂದಿರಂತೆ ಇದ್ದು ನಮ್ಮ ಹಬ್ಬ ಆಚರಣೆಗಳಲ್ಲಿ ಅವರು ಸಹ ಪಾಲ್ಗೊಳ್ಳುತ್ತಾರೆ ಅದರಂತೆ ನಾವು ಸಹ ಶ್ರೀ ರಾಮನವಮಿಯ ಹಬ್ಬದಲ್ಲಿ ಪಾಲ್ಗೊಂಡು ನಾವು ಸಹ ಶ್ರೀರಾಮನವಮಿ ಹಬ್ಬವನ್ನು ಆಚರಿಸುತ್ತಿರುವುದ್ದಾಗಿ ತಿಳಿಸಿದ್ದಾರೆ .

 

 

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಮೋಹನ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version