ಡಾ.ಜಿ.ಪರಮೇಶ್ವರ್ ರವರ ಶೀಘ್ರ ಗುಣಮುಖಕ್ಕೆ ಪ್ರಾರ್ಥಿಸಿ ಇಕ್ಬಾಲ್ ಅಹಮದ್ ರವರಿಂದ ವಿಶೇಷ ಪ್ರಾರ್ಥನೆ
ಮಾಜಿ ಉಪಮುಖ್ಯಂಮತ್ರಿ ಡಾ. ಜಿ. ಪರಮೇಶ್ವರ್ ರವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಶೀಘ್ರವಾಗಿ ಗುಷಮುಖರಾಗುವಂತೆ ಪ್ರಾರ್ಥಿಸಿ ನಗರದ ಟೌನ್ ಹಾಲ್ ವೃತ್ತದ ದರ್ಗಾದಲ್ಲಿ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಇಕ್ವಬಾಲ್ ಅಹಮದ್ ವಿಶೇಷ ಪ್ರಾರ್ಥನೆ ಅಲ್ಲಿಸಿದರು.
ನಗರದ ಟೌನ್ ಹಾಲ್ ವೃತ್ತದ ದರ್ಗಾಕ್ಕೆ ಶುಭ ಶುಕ್ರವಾರದಂದು ಅಪರಾ ಸಂಖ್ಯೆಯಲ್ಲಿ ಆಗಮಿಸಿದ ಡಾ. ಜಿ.ಪರಮೇಶ್ವರ್ ರವರ ಬೆಂಬಲಿಗರು ದರ್ಗಾದ ಧರ್ಮ ಗುರುಗಳ ಸಮ್ಮುಖದಲ್ಲಿ ದರ್ಗಾಕೆ ಚಾದರ್ ಹೊದಿಸುವ ಮೂಲಕ ನಮಾಜ್ ಮಾಡಿ ಅಲ್ಲಾಹುವಿನಲ್ಲಿ ಡಾ ಜಿ. ಪರಮೇಶ್ವರ್ ರವರಿಗೆ ಆರೋಗ್ಯ ಕರುಣಿಸಿ ಆದಷ್ಟು ಬೇಗ ಸಮಾಜ ಸೇವೆಗೆ ಮರಳಿ ಬರಲೆಂದು ಪ್ರಾರ್ಥನೆ ಸಲ್ಲಿಸಿದರು.
ಇನ್ನು ಧರ್ಮಗಳು ಪವಿತ್ರ ಕುರಾನ್ ಓದುವುದರ ಮೂಲಕ ಪರಮೇಶ್ವರ್ ರವರ ಶೀಘ್ರ ಗುಣಮುಖಕ್ಕೆ ಪ್ರಾರ್ಥಿಸಿದರು.
ಈ ವೇಳೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಮಕ್ಕಳಿಗೆ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಅಹಮದ್ ರವರು ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳು ಜನಪ್ರಿಯ ಶಾಸಕರಾದ ಡಾ.ಜಿ ಪರಮೇಶ್ವರ್ ರವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಅವರು ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಿ ದರ್ಗಾಕ್ಕೆ ಬಂದು ಸಕಲ ಮುಸಲ್ಮಾನ ಬಂಧುಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದು ನಾಡಿಗೆ ಹಾಗೂ ರಾಷ್ಟ್ರಕ್ಕೆ ಪರಮೇಶ್ವರ್ ಅವರ ಸೇವೆ ಅವಶ್ಯಕತೆ ಇದ್ದು ಅವರಿಗೆ ದೇವರು ಹೆಚ್ಚಿನ ಆರೋಗ್ಯ ಮತ್ತು ಆಯಸ್ಸನ್ನು ಕರುಣಿಸಿ ಸಾರ್ವಜನಿಕ ಸೇವೆಗೆ ಮರಳು ವಂತಾಗಲಿ ಎಂದು ಶುಭ ಶುಕ್ರವಾರದಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು ಡಾ.ಜಿ.ಪರಮೇಶ್ವರ್ ರವರು ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ತಮ್ಮ ಆಸ್ಪತ್ರೆಯಲ್ಲಿ, ಬಡವರಿಗೆ ಹಾಗೂ ಅವಶ್ಯಕತೆಯುಳ್ಳವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ. ಅವರಿಗೆ ದೇವರು ಉತ್ತಮ ಆರೋಗ್ಯ ಹಾಗೂ ಉನ್ನತ ಸ್ಥಾನಮಾನ ಕೊಟ್ಟು ಕಾಪಾಡಲಿ ಎಂದು ಮುತವಲ್ಲಿಗಳ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಫಯಾಸ್ ಅಹಮದ್ ಷರೀಫ್, ಸಯ್ಯದ್ ಫಯಾಜ್, ಇಸ್ಮಾಯಿಲ್, ಅಸ್ಲಂ ಫಯಾಜ್, ಬಾವಾ, ಅಕ್ರಮ್ ಉಲ್ಲಾಖಾನ್, ಗೌಫ ಷರೀಫ್, ಮುತವಲ್ಲಿಗಳಾ ಅಕ್ಬರ್ ಷರೀಫ್ ಮುಂತಾದವರು ಉಪಸ್ಥಿತರಿದ್ದರು.