ಅರು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಜೀವನದಲ್ಲಿ ಘೋರ ದುರಂತ ಮದುವೆಯಾದ ಐದು ತಿಂಗಳಲ್ಲೇ ಶಂಕ್ರಪ್ಪ ಆತ್ಮಹತ್ಯೆ.

ಅರು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಜೀವನದಲ್ಲಿ ಘೋರ ದುರಂತ ಮದುವೆಯಾದ ಐದು ತಿಂಗಳಲ್ಲೇ ಶಂಕ್ರಪ್ಪ ಆತ್ಮಹತ್ಯೆ.

 

ಕುಣಿಗಲ್ _ಕಳೆದ ಆರು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

 

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಅತ್ತಿ ಮರದ ಪಾಳ್ಯದ ಶಂಕ್ರಣ್ಣ ಹಾಗೂ ಸಂತೆಮಾವತ್ಹುರು ಗ್ರಾಮದ 25 ವರ್ಷದ ಯುವತಿ ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫೋಟೋಗಳು ಕಳೆದ ಆರು ತಿಂಗಳ ಹಿಂದೆ ಬಾರಿ ವೈರಲ್ ಆಗಿ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

 

 

ಆದರೆ ಇಂದು ಆ ದಂಪತಿಗಳ ಬಾಳಲಿ ಬಹುದೊಡ್ಡ ಆಘಾತ ಎದುರಾಗಿದೆ ಶಂಕ್ರಪ್ಪ ಇಂದು ಅತ್ತಿ ಮರದ ಪಾಳ್ಯ ದಲ್ಲಿರುವ ಜಮೀನಿನಲ್ಲಿ ನೇಣು ಹಾಕಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡಿದ್ದಾನೆ.

ಇನ್ನು ಆತ್ಮಹತ್ಯೆಗೆ ಒಳಗಾದ ಶಂಕ್ರಪ್ಪನ ಸಾವಿನ ಬೆನ್ನೆಲೆ ಆತನ ಹೆಂಡತಿ ಮೇಘನ ಗಂಡನ ಶವದ ಬಳಿ ಕೂತು ಕಣ್ಣೀರ ಹಾಕುತ್ತಿರುವ ದೃಶ್ಯ ಎಲ್ಲರ ಮನೆ ಕಲಕುವಂತಿತ್ತು.

 

 

ಇನ್ನು 2021 ರ ಅಕ್ಟೋಬರ್ ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನ ಹಾಗೂ ಅತ್ತಿ ಮರದ ಪಾಳ್ಯದ ಶಂಕ್ರಪ್ಪ ಅವರ ಮದುವೆ ನಡೆದಿತ್ತು 45 ವರ್ಷ ವಯಸ್ಸಾದರೂ ಶಂಕ್ರಪ್ಪ ಗೆ ಮದುವೆ ಆಗಿರಲಿಲ್ಲ ಅವರ ಬಳಿ ಮೇಘನ ಅವರೆ ಹೋಗಿ ತನ್ನನ್ನು ಮದುವೆಯಾಗುವಂತೆ ಪ್ರಸ್ತಾಪ ಇಟ್ಟಿದ್ದರು ಇದಕ್ಕೆ ಒಪ್ಪಿದ ಶಂಕರಣ್ಣ ಗ್ರಾಮ ಸಮೀಪದ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 

ಇನ್ನು ಮೇಘನಾಗು ಸಹ ಈ ಹಿಂದೆ ಬೇರೊಬ್ಬನ ಜೊತೆ ಮದುವೆ ಆಗಿತ್ತು ಆದರೆ ಕಳೆದ ಎರಡು ವರ್ಷದಿಂದ ಪತಿ ಕಾಣೆಯಾಗಿದ್ದು ಪತ್ನಿಯನ್ನು ನೋಡಲು ಸಹ ಬಂದಿರಲಿಲ್ಲ ಇದೇ ಕಾರಣಕ್ಕೆ ಶಂಕ್ರಣ್ಣ ಅವರ ಬಳಿ ಮೇಘನಾ ಮದುವೆಯಾಗುವಂತೆ ಕೇಳಿದರು ಇದಕ್ಕೆ ಒಪ್ಪಿದ್ದ ಇಬ್ಬರು ಮದುವೆ ಆಗಿದ್ದರು.

 

 

 

25 ವರ್ಷದ ಯುವತಿ ಹಾಗೂ 45 ವರ್ಷದ ರೈತರೊಬ್ಬರನ್ನು ಮದುವೆಯಾಗಿದ್ದ ಸುದ್ದಿ ಕೇಳಿ ಬಹುತೇಕರು ಎಂದು ಹರಸಿ ಹಾರೈಸಿದ್ದರು ಆದರೆ ಇಂದು ಮುಂಜಾನೆ ಹೊಲಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಶಂಕ್ರಪ್ಪ ಹೊಲದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಇನ್ನು ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version