ತುಮಕೂರು ನಗರಕ್ಕೆ ಹಬ್ಬಿದ ಕೇಸರಿ ಶಾಲು ಕಿಡಿ.

ತುಮಕೂರು ನಗರಕ್ಕೆ ಹಬ್ಬಿದ ಕೇಸರಿ ಶಾಲು v/s ಹಿಜಾಬ್ ಕಿಡಿ.

 

ತುಮಕೂರು_ರಾಜ್ಯಾದ್ಯಂತ ವಿವಾದದ ಅಲೆ ಎಬ್ಬಿಸಿರುವ ಹಿಜಾಬ್ ಹಾಗೂ ಕೇಸರಿ ಶಾಲಿನ ಕಿಡಿ ದಿನೇದಿನೇ ಕಾವು ಹೆಚ್ಚಿಸಿಕೊಳ್ಳುತ್ತಿದೆ ಪ್ರತಿದಿನ ಒಂದೊಂದು ಜಿಲ್ಲೆಗೆ ವ್ಯಾಪಿಸುತ್ತಾ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

 

 

ಇದರ ಬೆನ್ನಲ್ಲೇ ಮಂಗಳವಾರ ತುಮಕೂರು ನಗರಕ್ಕೂ ಸಹ ಕೇಸರಿ ಶಾಲಿನ ಕಿಡಿ ಹಬ್ಬಿದ್ದು ತುಮಕೂರಿನ ಜೂನಿಯರ್ ಕಾಲೇಜು ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವ ಮೂಲಕ ತರಗತಿ ಪ್ರವೇಶಕ್ಕೆ ಮುಂದಾಗಿದ್ದಾರೆ.

 

 

ಇದರ ಸೂಕ್ಷ್ಮತೆಯನ್ನು ಅರಿತು ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಕೂಡಲೇ ಅದನ್ನು ತಡೆಯಲು ಮುಂದಾಗಿರುವ ಪ್ರಸಂಗ ವರದಿಯಾಗಿದೆ.

 

 

 

 

 

ಒಂದೆಡೆ ಇಂದು ಹೈಕೋರ್ಟ್ ಮೆಟ್ಟಿಲೇರುವ ವಿವಾದ ಇಂದು ತೀರ್ಪಿಗೆ ಕ್ಷಣಗಣನೆ ಇರುವ ಸಮಯದಲ್ಲಿ ಗೃಹ ಸಚಿವರು ಆದ ಆರಗ ಜ್ಞಾನೇಂದ್ರ ರವರ ಉಸ್ತುವಾರಿ ಕ್ಷೇತ್ರದಲ್ಲಿ ಕೇಸರಿ ವಿವಾದ ಮುಂಚೂಣಿಗೆ ಬರುತ್ತಿದ್ದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version