ಕೊರಟಗೆರೆ ಗಾರ್ಮೆಂಟ್ಸ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ತಪ್ಪಿದ ಬಾರಿ ಅನಾಹುತ

ಕೊರಟಗೆರೆ ಗಾರ್ಮೆಂಟ್ಸ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ, ತಪ್ಪಿದ ಬಾರಿ ಅನಾಹುತ

 

 

ಕೊರಟಗೆರೆ – ಲಾರಿ ಹಾಗೂ ಗಾರ್ಮೆಂಟ್ಸ್ ಬಸ್ ನಡುವೆ ಅಪಘಾತ ಸಂಭವಿಸಿ ಅದೃಷ್ಟವಶಾತ್ ಗಾರ್ಮೆಂಟ್ಸ್ ನೌಕರರು ಯಾವುದೇ ಪ್ರಾಣಾಪಾಯಇಲ್ಲದೆ ಪಾರಾಗಿರುವ ಘಟನೆ ವರದಿಯಾಗಿದೆ.

 

 

 

 

ಇಂದು ಸಂಜೆ ಕೊರಟಗೆರೆ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿದ್ದು  ಲಾರಿ ರಸ್ತೆ ಬದಿ ಮಗುಚಿ ಬಿದ್ದಿದೆ ಸುಮಾರು 75 ಅಧಿಕ ಮಂದಿ ಮಹಿಳಾ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಯಾವುದೇ ಗಂಭೀರ ಗಾಯ ಇಲ್ಲದೆ ಹಲವು ಕಾರ್ಮಿಕರು ಪಾರಾಗಿದ್ದಾರೆ.

 

ಘಟನೆ ನಡೆದ ಕೂಡಲೇ ಕೊರಟಗೆರೆಯ ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್ ಸ್ಥಳಕ್ಕೆ ದಾವಿಸಿ, ಗಾಯಾಳುಗಳನ್ನ ವಿಚಾರಿಸಿದ ಅವರು ತಮ್ಮ ವಾಹನದಲ್ಲೆ ಗಾಯಾಳುಗಳನ್ನ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

 

 

 

 

ಇನ್ನು ಘಟನೆಯಿಂದ ಕಂಗಾಲಾದ ಮಹಿಳಾ ನೌಕರರು ಮನೆಗೆ ತೆರಳಲು ಸ್ವತಹ ಪಿ ಆರ್ ಸುಧಾಕರ್ ಲಾಲ್ ರವರು ಖಾಸಗಿ ವಾಹನದ ಮೂಲಕ ಮನೆಗೆ ತೆರಳಲು ಸಹಕರಿಸಿ ಮಾನವೀಯತೆ ತೋರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version