ಕೆಂಪೇಗೌಡರ ಜಯಂತಿ ದಿನಾಚರಣೆ ಹಿನ್ನೆಲೆ ಪಟ್ಟಣದ ಅತಿಥಿ ಗೃಹದಲ್ಲಿ ಪೂರ್ವಭಾವಿ ಸಭೆ 

ಕೆಂಪೇಗೌಡರ ಜಯಂತಿ ದಿನಾಚರಣೆ ಹಿನ್ನೆಲೆ ಪಟ್ಟಣದ ಅತಿಥಿ ಗೃಹದಲ್ಲಿ ಪೂರ್ವಭಾವಿ ಸಭೆ 

ಹನೂರು :-ಕೆಂಪೇಗೌಡರು ನಮ್ಮ ನಾಡಿನ ಬಹುಮುಖ್ಯ ಸಾಂಸ್ಕೃತಿಕ ನಾಯಕರಲ್ಲೊಬ್ಬರು. ಬೆಂಗಳೂರು ಮಹಾನಾಡು ನಿರ್ವತೃ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅನೇಕ ಸಾಮಂತರು, ಪಾಳೆಯಗಾರರು, ನಾಡಪ್ರಭುಗಳಲ್ಲಿ ಅತ್ಯಂತ ಪ್ರಮುಖರಾಗಿದ್ದವರು.

 

 

 

 

 

 

 

 

 

 

 

 

 

 

 

ಇದೇ ತಿಂಗಳು ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆ ಪಟ್ಟಣದ ಅತಿ ಗಣ್ಯ ವ್ಯಕ್ತಿಗಳ ಅತಿಥಿ ಗೃಹದಲ್ಲಿ ಕ್ಷೇತ್ರದ ಶಾಸಕ ಮಂಜುನಾಥ್ ಸಮ್ಮುಖದಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳು ಸರ್ಕಾರಿ ಅಧಿಕಾರಿಗಳು ಹಾಗೂ ಹನೂರು ಪಟ್ಟಣದ ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ಪೂರ್ವಭಾವಿ ಸಭೆ ನಡೆಯಿತು.

 

 

 

 

 

 

 

 

 

 

 

 

 

ಇದೇ ವೇಳೆ ಮಾತನಾಡಿದ ಶಾಸಕ ಎಂಆರ್ ಮಂಜುನಾಥ್ ಪ್ರತಿವರ್ಷ ಆಚರಣೆ ಮಾಡುವಂತೆ ಈ ವರ್ಷವೂ ಕೂಡ ಕೆಂಪೇಗೌಡರ ಜಯಂತಿ ನಡೆಯಲಿ. ಅವರ ಸತ್ಯ ಇತಿಹಾಸ ಸಾಧನೆ ತಿಳಿಸುವುದರ ಜೊತೆಗೆ ಜಯಂತಿ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಯ ನೌಕರ ಸಿಬ್ಬಂದಿಗಳು ಹಾಗೂ ಹನೂರು ಪಟ್ಟಣದ ಸಮುದಾಯಗಳ ಮುಖಂಡರುಗಳು ಭಾಗಿಯಾಗಿದ್ದರು.

 

ವರದಿ:- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version