ಮೈಸೂರಿನಲ್ಲಿ ಎಲ್ಲೆಲ್ಲೋ ರೇಪ್ ಕೇಸ್ ಆದ್ರೇ ನನ್ನನ್ನು ಯಾಕೆ ಕೇಳ್ತಿರಪ್ಪೋ : ಜಿ ಎಂ ಸಿದ್ದೇಶ್ವರ್ ಉಡಾಫೆ ಉತ್ತರ…

ಮೈಸೂರಿನಲ್ಲಿ ಎಲ್ಲೆಲ್ಲೋ ರೇಪ್ ಕೇಸ್ ಆದ್ರೇ ನನ್ನನ್ನು ಯಾಕೆ ಕೇಳ್ತಿರಪ್ಪೋ : ಜಿ ಎಂ ಸಿದ್ದೇಶ್ವರ್ ಉಡಾಫೆ ಉತ್ತರ…

 

 

ದಾವಣಗೆರೆ:- ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಈಗಾಗಲೇ ರಾಜ್ಯದಂತ್ಯ ಆಕ್ರೋಶಕ್ಕೆ ಕಾರಣ ಆಗಿದೆ. ರಾಜಕೀಯ ವಲಯದಲ್ಲಿ ಕೂಡ ಬಿರುಗಾಳಿ ಎಬ್ಬಿಸಿದೆ. ಅದ್ರೇ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಸಾಹೇಬರು ಮಾತ್ರ ನನಗೆ ಇದರ ಬಗ್ಗೆ ಹೊತ್ತೇ ಇಲ್ಲ ಎಂಬ ಉಡಾಫೆ ಉತ್ತರ ನೀಡಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ಎಲ್ಲೆಲ್ಲೋ ರೇಪ್ ಕೇಸ್ ನಡೆದ್ರೇ ನನ್ನನ್ನು ಯಾಕೆ ಕೇಳ್ತಿರಪ್ಪೋ ಎಂದು ಉಡಾಫೆ ಉತ್ತರ ನೀಡುವ ಮೂಲಕ ಜನ್ರ ಆಕ್ರೋಶಕ್ಕೆ ಕಾರಣರಾದರು. ಇನ್ನು ನಾನು ಏನೂ ನೋಡಿಲ್ಲಪ್ಪಾ, ನಮ್ಮ ಜಿಲ್ಲೆಯಲ್ಲಿ ಏನಾದರೂ ಆಗಿದ್ರೇ ಕೇಳು ಅದಕ್ಕೆ ಖಂಡಿತವಾಗಿ ಉತ್ತರಿಸಿ ಅಧಿಕಾರಿಗಳಿ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ. ಅದ್ರೇ ಮೈಸೂರಿನಲ್ಲಾಗಿರುವುದು ನನಗೆ ಏನ್ ಗೊತ್ತು ಹೇಳು, ನಮ್ಮದು ಟಿವಿ ನೋಡದೆ ಬದುಕು ಸಾಗಿಸುತ್ತೇನೆ, ಬೆಳಿಗ್ಗೆ ಎದ್ದು ಬದುಕು ನೋಡಿಕೊಂಡ್ರೇ ಸಂಜೆ ಹೋಗಿ ಮಲಗಿಕೊಂಡರೇ ಸಾಕಾಗಿ ಹೋಗುತ್ತದೆ. ನನಗೆ ರೇಪು ಗೊತ್ತಿಲ್ಲ ಏನೂ ಗೊತ್ತಿಲ್ಲ, ಮೈಸೂರು ಗ್ಯಾಂಗ್ ರೇಪ್ ವಿಚಾರ ಬಿಟ್ಟು ಬೇರೆ ವಿಚಾರ ಇದ್ರೇ ಹೇಳಿ ಎಂದು ಉಡಾಫೆ ಉತ್ತರ ನೀಡಿ ನಿರ್ಗಮಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version