ಸ್ಮಶಾನವನ್ನು ಸ್ವಚ್ಛಗೊಳಿಸಿದ ಯುವಕರ ತಂಡ

 

 

 

ತುಮಕೂರು ನಗರದ ಗೆದ್ದಲಹಳ್ಳಿ ಹಾಗೂ ಮರಳೂರು ದಿಣ್ಣೆ ಸಮೀಪವಿರುವ ಮುಸ್ಲಿಮ್ ಸಮುದಾಯಕ್ಕೆ ಮೀಸಲಿಟ್ಟ ಸ್ಮಶಾನ ಜಾಗವನ್ನು ಸ್ಥಳೀಯ ಮುಖಂಡರಾದ ಚಾಂದ್ ಪಾಷಾ ನೇತೃತ್ವದಲ್ಲಿ ಸ್ಮಶಾನವನ್ನು ಸ್ವಚ್ಛಗೊಳಿಸಲಾಯಿತು.ಸುಮಾರು ದಿನಗಳಿಂದ ಸ್ಮಶಾನದಲ್ಲಿ ಗಿಡಗಂಟೆಗಳು ಬೆಳೆದು ಮಣ್ಣು ಮಾಡಲು ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು ಇದನ್ನು ಗಮನಿಸಿದ ಸ್ಥಳೀಯ ಯುವಕರು ಸ್ಥಳೀಯ ಮುಖಂಡರು ಹಾಗೂ ಸಮಾಜ ಸೇವಕರಾದ ಚಾಂದ್ ಪಾಷಾರವರ ಗಮನಕ್ಕೆ ತಂದ ಕೂಡಲೇ ಸ್ಪಂದಿಸಿದ ಸ್ಥಳೀಯ ಮುಖಂಡ ಚಾಂದ್ ಪಾಷಾರವರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಇಡೀ ಸ್ಮಶಾನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ನೆರವಾಗಿದ್ದಾರೆ .

 

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದರು ಸ್ಥಳೀಯ ಮುಖಂಡರ ಚಾಂದ್ ಪಾಷಾರವರು ಸ್ಮಶಾನಕ್ಕೆ ಆಗಮಿಸುವ ಸಾರ್ವಜನಿಕರು ಮಾಸ್ಕ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಕಾರ್ಯವನ್ನು ಮುಗಿಸಬೇಕು ಕೊರನ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು ಎಲ್ಲರೂ ಕೂಡ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಸ್ವಯಂ ಸೇವಕರಾದ ಅಬ್ದುಲ್ ಸತ್ತಾರ್, ಇಸ್ಮಾಯಿಲ್ ಬಾಬು, ನಜೀರ್ ಅಹ್ಮದ್ ,ಮೆಹಬೂಬ್, ಫೈರೋಸ್ ಅನ್ವರ್ ಖಾನ್, ಡಿಕೆ ಚಂದು, ಅಮಾನುಲ್ಲ, ಗೌಸ್ ಪೀರ್ ಸೇರಿದಂತೆ ಇತರರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version