ಮಕ್ಕಳೊಂದಿಗೆ ಗಂಧದಗುಡಿ ಚಲನಚಿತ್ರ ವೀಕ್ಷಿಸಿದ _ಮಾಜಿ ಸಚಿವ ಸೊಗಡು ಶಿವಣ್ಣ

ಮಕ್ಕಳೊಂದಿಗೆ ಗಂಧದಗುಡಿ ಚಲನಚಿತ್ರ ವೀಕ್ಷಿಸಿದ _ಮಾಜಿ ಸಚಿವ ಸೊಗಡು ಶಿವಣ್ಣ

 

 

ತುಮಕೂರು ನಗರದ ಜೈ ಭಾರತ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ಗಂಧದ ಗುಡಿ ಚಲನ ಚಿತ್ರವನ್ನು  ದಿಬ್ಬೂರಿನ ಸರ್ಕಾರಿ ಶಾಲೆ ಮಕ್ಕಳ ಜೊತೆ ಮಾಜಿ ಸಚಿವ ಸೊಗಡು ಶಿವಣ್ಣ ವೀಕ್ಷಿಸಿ ಸಂತಸ ಪಟ್ಟರು.

 

 

 

ಮಕ್ಕಳೊಡನೆ ಗಂಧದ ಗುಡಿ ಚಲನ ಚಿತ್ರ ವೀಕ್ಷಿಸಿದ ಬಳಿಕ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ನಾಡು ನುಡಿ ವನ್ಯಜೀವಿ ಪರಿಸರ ನಮ್ಮ ನಾಡಿನ ಅತ್ಯಮೂಲ್ಯ ವನಸಿರಿಗಳ ಬಗ್ಗೆ ಡಾ. ರಾಜಕುಮಾರ್ ಅವರು ಅಂದು ಗಂಧದ ಗುಡಿ ಸಿನಿಮಾ ಮಾಡಿ ನಾಡಿನ ಜನಕ್ಕೆ ಅರಿವು ಮೂಡಿಸಿದರು ಇಂದು ಡಾ. ಪುನೀತ್ ರಾಜಕುಮಾರ್ ಅವರು ಪರಿಸರ ಕಾಳಜಿಯ ಹಾಗೂ ನಾವೆಲ್ಲರೂ ಬದುಕುವ ರೀತಿಯ ಮಾದರಿ  ಜೀವನವನ್ನು ತೋರಿಸಿಕೊಟ್ಟು ಹೋಗಿದ್ದಾರೆ .

 

 

 

ಅವರು ಸದಾ ಕಾಲ ನಮ್ಮ ಜೊತೆ ಇರುತ್ತಾರೆ ಡಾ. ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version