ರಸಗೊಬ್ಬರ ತುಂಬಿದ್ದ ಲಾರಿ ಅಪಘಾತ ಚಾಲಕನಿಗೆ ಗಂಭೀರ ಗಾಯ

ರಸಗೊಬ್ಬರ ತುಂಬಿದ್ದ ಲಾರಿ ಅಪಘಾತ ಚಾಲಕನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ಗಡಿ ಭಾಗವಾದ ನಾಲ್ ರೋಡ್ ಸಮೀಪದ ಗರಿಕೆಕಂಡಿ ಚೆಕ್ ಪೋಸ್ಟ್ ಸಮೀಪ ತಮಿಳುನಾಡಿನ ಈರೋಡ್ ನಿದ್ದ ರೈತರ ರಸಗೊಬ್ಬರ ತುಂಬಿಕೊಂಡು ಕರ್ನಾಟಕದ ಮೈಸೂರಿನತ್ತ ಬರುತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

 

 

 

 

 

 

 

 

 

 

 

 

 

ಅಪಘಾತದಲ್ಲಿ ಲಾರಿಯೂ ಸಂಪೂರ್ಣ ಜಖಂ ಗೊಂಡಿದ್ದು, ರಸಗೊಬ್ಬರದ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾವೆ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗಾಯಾಳು ಚಾಲಕನನ್ನು ತಮಿಳುನಾಡಿನ ಹಂದಿಯೂರು ಆಸ್ಪತ್ರೆಗೆ ಸೇರಿಸಲಾಗಿದೆ. ಎಂದು ತಿಳಿದು ಬಂದಿದೆ

ಈ ಸಂಬಂಧ ತಮಿಳುನಾಡಿನ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಕೊಂಡಿದ್ದಾರೆ.

 

ವರದಿ : ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version