ಹಾನಗಲ್ ನ ಕುಂಚಿಟಿಗ ಸಮುದಾಯ ಭವನದಲ್ಲಿ ಭಾಜಪ ಪಕ್ಷದ ಅಭ್ಯರ್ಥಿಯ ಪರ ಮಾತಯಾಚನೆ ಮಾಡಿದ ಶಾಸಕ ಚಿದಾನಂದ ಗೌಡ

ಹಾನಗಲ್ ನ ಕುಂಚಿಟಿಗ ಸಮುದಾಯ ಭವನದಲ್ಲಿ ಭಾಜಪ ಪಕ್ಷದ ಅಭ್ಯರ್ಥಿಯ ಪರ ಮಾತಯಾಚನೆ ಮಾಡಿದ ಶಾಸಕ ಚಿದಾನಂದ ಗೌಡ

 

ಇಂದು ಮಾನ್ಯ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ರವರು ಉಪಚುನಾವಣೆ ಪ್ರಯುಕ್ತ ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಶಿವರಾಜ ಸಜ್ಜನರ ರವರ ಪರವಾಗಿ ಕುಂಚಿಟಿಗರ (ಕಮಾಟಿ) ಸಮುದಾಯ ಭವನದಲ್ಲಿ ಹಾಗೂ ಮಸಣ ಕಟ್ಟಿ ಯಲ್ಲಿ ನಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮತಯಾಚನೆ ಮಾಡಿದರು. ಹಾನಗಲ್ ಕ್ಷೇತ್ರದಲ್ಲಿ ಇರುವ ಕುಂಚಿಟಿಗ ಸಮುದಾಯ ಹನ್ನೆರಡು ಸಾವಿರ ಮತಗಳು ಕೂಡ ಭಾಜಪ ಅಭ್ಯರ್ಥಿಯಾದ ಶಿವರಾಜ ಸಜ್ಜನ ರವರಿಗೆ ನೀಡುವುದರ ಮೂಲಕ ಉತ್ತಮ ಹಾಗೂ ಕ್ರಿಯಾಶೀಲಾ ವ್ಯಕ್ತಿಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವಂತೆ ಕೇಳಿಕೊಂಡರು.

 

ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಜೆ. ಸಿ ಮಾಧುಸ್ವಾಮಿ ಯವರು, ವಿಧಾನ ಪರಿಷತ್ ಶಾಸಕರಾದ ವೈ.ಎ ನಾರಾಯಣಸ್ವಾಮಿ ಯವರು, ಶಾಸಕರಾದ ರಾಜೇಶ್ ಗೌಡ ರವರು, ಚಿತ್ರದುರ್ಗ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಹನುಮಂತೇ ಗೌಡ ರವರು, ಕುಂಚಿಟಿಗ ಸಮುದಾಯದ ಮುಖಂಡರಾದ ಚಂದ್ರಕಾಂತ್, ಉಮೇಶ್, ಗಣೇಶ್ ರವರು, ಮಹಿಳಾ ಸಂಘದ ಕಾರ್ಯಕರ್ತರು ಹಾಗೂ ಇತರೇ ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version