ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ದೂರು ನೀಡಿದ ಹಾಲಿ ಶಾಸಕ ಡಿ.ಸಿ ಗೌರಿಶಂಕರ್

ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ದೂರು ನೀಡಿದ ಹಾಲಿ ಶಾಸಕ ಡಿ.ಸಿ ಗೌರಿಶಂಕರ್

 

ತುಮಕೂರು- ನನಗೆ ಮಾಜಿ ಶಾಸಕ ಸುರೇಶ್ ಗೌಡರಿಂದ ಜೀವ ಬೆದರಿಕೆ ಇದೆ,ಯಾವ ರೀತಿಯಲ್ಲಾದರೂ ಕೊಲೆ ಮಾಡಿಸಬಹುದೆಂಬ ಅನುಮಾನವಿದ್ದು,ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಶಾಸಕರಾದ ಡಿ ಸಿ ಗೌರೀಶಂಕರ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

 

 

ಮಾಜಿ ಶಾಸಕ ಬಿ ಸುರೇಶ್ ಗೌಡರು ಅರೆಯೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಡಿ ಸಿ ಗೌರೀಶಂಕರ್ ನನ್ನನ್ನು ಕೊಲೆ ಮಾಡಲು ಜೈಲಲ್ಲಿರುವ ಸುಜಯ್ ಭಾರ್ಗವ ಎಂಬಾತನಿಗೆ 5 ಕೋಟಿಗೆ ಸುಫಾರಿ ಕೊಟ್ಟಿದ್ದೀಯ ನಿನ್ನಿಂದ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆರೋಪಮಾಡಿ ಸಾರ್ವಜನಿಕವಾಗಿ ನನ್ನ ತೇಜೋವಧೆ ಮಾಡಿದ್ದಾರೆ,‌ ಇವರ ಹೇಳಿಕೆ ಗಮನಿಸಿದರೆ ಮಾಜಿ ಶಾಸಕರೇ ನನ್ನನ್ನು ಕೊಲೆ ಮಾಡಿಸುವ ಹುನ್ನಾರ ಮಾಡಿದ್ದಾರೆ ಎಂಬ ಅನುಮಾನ ಮೂಡುತ್ತಿದೆ,ಅವರಿಂದ ಜೀವ ಭಯವಿದೆ ನನಗೆ ಸೂಕ್ತ ರಕ್ಷಣೆ ನೋಡಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

 

 

 

 

ಮಾಜಿ ಶಾಸಕರು ಗ್ರಾಮಾಂತರ ಕ್ಷೇತ್ರದಲ್ಲಿ ಕೋಮು ಸೌಹಾರ್ಧತೆ ಕದಡುವಂತ ಹೇಳಿಕೆ ನೀಡುತ್ತಿದ್ದು ಜನರು ಭಯಭೀತರಾಗಿದ್ದಾರೆ,ಮಾಜಿ ಶಾಸಕರು ನನ್ನ ಜನಪ್ರೀಯತೆ ಸಹಿಸದೆ ಹತಾಶರಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು ಈ ಬಗ್ಗೆ ಸಿ ಐ ಡಿ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಬೇಕೆಂದು ಶಾಸಕರಾದ ಡಿ ಸಿ ಗೌರೀಶಂಕರ್ ಮನವಿಯಲ್ಲಿ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version