ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಜಾನುವಾರು ವಸ್ತುಗಳು ಬೆಂಕಿಗೆ ಆಹುತಿ.

ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಜಾನುವಾರು ವಸ್ತುಗಳು ಬೆಂಕಿಗೆ ಆಹುತಿ.

 

 

 

ತುಮಕೂರು _ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಜಾನುವಾರು ಹಾಗೂ ವಸ್ತುಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

 

 

 

ತುಮಕೂರು ಗ್ರಾಮಾಂತರ ಕ್ಷೇತ್ರದ ಕಾರನಹಳ್ಳಿ ಗ್ರಾಮದಲ್ಲಿ ನಡೆದಿದ್ದು ರೈತ ಚಿಕ್ಕಣ್ಣ ಎಂಬುವವರ ಕೊಟ್ಟಿಗೆಗೆ ಇಂದು ಮುಂಜಾನೆ ಬೆಂಕಿ ಬಿದ್ದು 25 ಮೇಕೆ, 9 ಹಸು ,ಟ್ರ್ಯಾಕ್ಟರ್, ಬೈಕ್, , 10 ಕ್ವಿಂಟಾಲ್ ಅಡಿಕೆ, 600 ತೆಂಗು, ಮೋಟರ್ ಪಂಪ್ ಕೇಬಲ್, ರಾಗಿ ಕುಯ್ಯುವ ಯಂತ್ರ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

 

 

 

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ರೈತ ಚಿಕ್ಕಣ್ಣ ಇಂದು ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಇನ್ನು ಯಾರ ಮೇಲೆ ಸಂಶಯವು ಇಲ್ಲ ಘಟನೆ ಹೇಗಾಯಿತು ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ ಆದರೆ ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಜಾನುವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಕಣ್ಣೀರು ಹಾಕಿದ್ದಾರೆ.

 

 

 

ಇನ್ನು ಹೊಲದಲ್ಲಿದ್ದ ಬೋರ್ ಗೆ ಮೋಟರ್ ಹಾಗೂ ಪಂಪು ಬಿಡಲು ಶನಿವಾರ ಹಲವು ಸಾಮಗ್ರಿಗಳನ್ನ ಖರೀದಿ ಮಾಡಿದ್ದು ಎಲ್ಲವೂ ಬೆಂಕಿಗೆ ಆಹುತಿಯಾಗಿವೆ ಎಂದಿದ್ದಾರೆ.

 

 

 

 

ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version