ಬಾವಿಗೆ ಬಿದ್ದು ಕರಡಿ ಸಾವು

*ಬಾವಿಗೆ ಬಿದ್ದು ಕರಡಿ ಸಾವು*

 

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ದೊಗ್ಗನಹಳ್ಳಿ ಗ್ರಾಮದ ಹನುಮಂತರಾಯಪ್ಪ ಬಿನ್ ದುರ್ಗಪ್ಪ ನವರಿಗೆ ಸೇರಿದ ಸರ್ವೇ ನಂಬರ್ 82/4 ರ ಜಮೀನಿನಲ್ಲಿ ಕರಡಿಯೊಂದು ರಾತ್ರಿ ಸಮಯದಲ್ಲಿ ಆಹಾರ ಅರಸಿ ಬಂದಾಗ ಬಾವಿಗೆ ಬಿದ್ದು ಮೃತ ಪಟ್ಟಿದೆ. ಜಮೀನಿನ ಮಾಲೀಕರಾದ ಹನುಮಂತರಾಯಪ್ಪನವರು ತೋಟದಲ್ಲಿ ಕೆಲಸ ಮಾಡಲು ಹೋದಾಗ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಕರಡಿಯನ್ನು ನೋಡಿ ಸ್ಥಳೀಯ ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿ ನಾಗರಾಜು ರವರಿಗೆ ಕರೆ ಮಾಡಿ ತಿಳಿಸಿದ್ದಾರೆ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಮೃತ ಪಟ್ಟಿದಂತಹ ಕರಡಿಯನ್ನು ಬಾವಿಯಿಂದ ಮೇಲೆ ಎತ್ತಿ ಹಿರೇಬೆಟ್ಟದ ಅರಣ್ಯ ಇಲಾಖೆಯ ಮುಖ್ಯಧಿಕಾರಿಗಳ ಆದೇಶದಂತೆ ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ.

 

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿ ನಾಗರಾಜು, ಸಿಬ್ಬಂದಿಗಾಳದ ಮಂಜುನಾಥ್ ಬಿ.ಸಿ. ಚಂದ್ ಪಾಷಾ, ವೆಂಕಟರಾಮ್, ಜಿ.ವಿ.ನರಸಿಂಹಯ್ಯ, ನರಸರಾಜು, ಕೃಷ್ಣಮೂರ್ತಿ ಮತ್ತು ದೊಗ್ಗನಹಳ್ಳಿ ಗ್ರಾಮಸ್ಥರು ಹಾಜರಿದ್ದರು..

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version