ವಿವಿಧ ಸೌಲಭ್ಯಕ್ಕಾಗಿ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

 

ತುಮಕೂರು

ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗವು 2021-22ನೇ ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಬ್ಯಾಂಕ್ ಸಾಲ ಮತ್ತು ಉಚಿತ ಸುಧಾರಿತ ಉಪಕರಣಗಳ ಸೌಲಭ್ಯ ಒದಗಿಸಲು ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಬಡಗಿ, ಕ್ಷೌರಿಕ, ದೋಬಿ, ಕಲ್ಲುಕುಟುಕ, ಗಾರೆ, ಕಮ್ಮಾರಿಕೆ, ಬುಟ್ಟಿ ಹೆಣೆಯುವುದು, ಕಸೂತಿ (ಜರಿ ಕೆಲಸ), ಕರಕುಶಲ ವಸ್ತು ತಯಾರಿಸುವ (ಹ್ಯಾಂಡಿಕ್ರಾಫ್ಟ್) ವೃತ್ತಿ ನಿರತ ಗ್ರಾಮೀಣ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದು. ಈ ಸಾಲ ಸೌಲಭ್ಯದ ಯೋಜನಾ ವೆಚ್ಚದ ಗರಿಷ್ಠ ಮೊತ್ತವು 30,000 ರೂ.ಗಳಾಗಿದ್ದು ಯೋಜನಾ ವೆಚ್ಚದ ಶೇ.60 ರಷ್ಟು ಅಂದರೆ ಗರಿಷ್ಠ 10,000 ರೂ. ಗಳ ಸಹಾಯಧನ ನೀಡಲಾಗುವುದು.

 

ಅದೇ ರೀತಿ ಉಚಿತ ಸುಧಾರಿತ ಉಪಕರಣಗಳ ಸೌಲಭ್ಯಕ್ಕಾಗಿ ಬಡಗಿ, ಕ್ಷೌರಿಕ, ದೋಬಿ, ಕುಲ್ಲುಕುಟುಕ, ಗಾರೆ, ಕಮ್ಮಾರಿಕೆ, ಕಸುಬಿನ ವೃತ್ತಿಪರ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಆಸಕ್ತ ವೃತ್ತಿ ನಿರತ/ವೃತ್ತಿಪರ ಕುಶಲಕರ್ಮಿಗಳು ತಮ್ಮ ಭರ್ತಿ ಮಾಡಿದ ಅರ್ಜಿಯನ್ನು ಜುಲೈ 20ರೊಳಗಾಗಿ ಉಪನಿರ್ದೇಶಕರು(ಗ್ರಾ.ಕೈ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೈಗಾರಿಕಾ ವಸಾಹತು, ಬಿ.ಹೆಚ್.ರಸ್ತೆ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version