ರೇಷನ್ ಕಾರ್ಡ್ ನಲ್ಲಿ “ದತ್ತಾ”, ಬದಲು “ಕುತ್ತಾ” ಎಂದು ಬರೆದಿದ್ದಕ್ಕೆ ನಾಯಿಯಂತೆ ಬೊಗಳಿ ಅಧಿಕಾರಿಯ ಬೆನ್ನು ಹತ್ತಿದ ಯುವಕ, ಓಡಿ ಹೋದ ಅಧಿಕಾರಿ!

ರೇಷನ್ ಕಾರ್ಡ್ ನಲ್ಲಿ “ದತ್ತಾ”, ಬದಲು “ಕುತ್ತಾ” ಎಂದು ಬರೆದಿದ್ದಕ್ಕೆ ನಾಯಿಯಂತೆ ಬೊಗಳಿ ಅಧಿಕಾರಿಯ ಬೆನ್ನು ಹತ್ತಿದ ಯುವಕ, ಓಡಿ ಹೋದ ಅಧಿಕಾರಿ!

 

ಪ.ಬಂಗಾಳ_ರೇಷನ್ ಕಾರ್ಡ್ ನಲ್ಲಿ ತಪ್ಪಾಗಿ ಹೆಸರು ಮುದ್ರಿಸಿದ್ದಕ್ಕೆ ವ್ಯಕ್ತಿಯೊಬ್ಬ ನಾಯಿಯಂತೆ ಬೊಗಳಿ ಪ್ರತಿಭಟನೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

 

 

 

ರೇಷನ್​ ಕಾರ್ಡ್​ನಲ್ಲಿ ‘ಕುತ್ತಾ’ ಎಂದು ತಪ್ಪಾಗಿ ಮುದ್ರಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವರು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕಾರಿನ ಕಿಟಕಿ ಬಳಿ ನಿಂತು ನಾಯಿಯಂತೆ ಬೊಗಳುತ್ತಾ ದಾಖಲೆಗಳನ್ನು ಅಧಿಕಾರಿಗೆ ತೊರಿಸಿದ್ದಾನೆ.

 

 

ಶ್ರೀಕಂಠಿ ಕುಮಾರ್​ ದತ್ತ ಎಂದು ಬರೆಯಲು ಶ್ರೀಕಂಠಿ ಕುಮಾರ್​ ಕುತ್ತಾ ಎಂದು ಬರೆದಿದ್ದಾರೆ. ಕುತ್ತಾ ಅಂದರೆ ನಾಯಿ ಎಂದರ್ಥ.ಈ ಹಿಂದೆ ಎರಡು ಮೂರು ಬಾರಿ ಗಮನಕ್ಕೆ ತಂದು ಹೆಸರು ಸರಿಪಡಿಸಿದರೂ ಮತ್ತೆ ಅದೇ ತಪ್ಪು ಮರುಕಳಿಸಿರುವ ಕಾರಣ ಈ ಬಾರಿ ಶ್ರೀಕಂಠಿ ಪ್ರತಿಭಟನೆ ಮಾಡಿದ್ದಾರೆ.

 

 

 

 

ನಾಯಿಯಂತೆ ಬೊಗಳಿ ಪ್ರತಿಭಟಿಸಿದ್ದಕ್ಕೆ ಬಂಕುರಾ ಜಿಲ್ಲಾ ಆಡಳಿತದ ಅಧಿಕಾರಿಗಳು ತಪ್ಪನ್ನು ತಿದ್ದಿ ಕೊಡುವ ಭರವಸೆಯನ್ನು ನೀಡಿದ್ದಾರೆ.

 

 

 

ಕ್ಯಾಂಪ್​ನಲ್ಲಿ ಹಿರಿಯ ಅಧಿಕಾರಿಯನ್ನು ನೋಡಿ, ಅವರತ್ತ ಓಡಿದೆ. ಬಳಿಕ ಅವರಿಗೆ ನನ್ನ ಪಡಿತರ ಚೀಟಿ ತೋರಿಸಿ, ಅದನ್ನು ಓದಲು ಕೇಳಿದೆ. ಆದರೆ, ಜಂಟಿ ಬಿಡಿಒ ಅಧಿಕಾರಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅವರು ಓಡಿಹೋದರು. ಅವರು ಯಾಕೆ ಓಡಿದರು? ಏಕೆ ಹೆದರಿದರು? ದತ್ತ ಪ್ರಶ್ನಿಸಿದ್ದಾರೆ.

 

 

 

ಬಳಿಕ ಅಧಿಕಾರಿಯ ಬಳಿ‌ನಾಯಿಯಂತೆ ಬೊಗಳಿ ಪ್ರತಿಭಟಿಸಿದಾಗ ಸಮಸ್ಯೆ ಬಗೆಹರಿಸುವ ಭರವಸೇ ನೀಡಿದ್ದಾರೆ ಎಂದು ದತ್ತಾ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!