ಕುಟುಂಬ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ,ರಕ್ಷಿಸಲು ಹೋದ ಪೊಲೀಸರಿಗೆ ಗಂಭೀರ ಗಾಯ.

ಕುಟುಂಬ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ,ರಕ್ಷಿಸಲು ಹೋದ ಪೊಲೀಸರಿಗೆ ಗಂಭೀರ ಗಾಯ.

ತುಮಕೂರು_ ಗಂಡ-ಹೆಂಡತಿಯ ನಡುವೆ ತಾರಕಕ್ಕೇರಿದ ಜಗಳ ನಡುವೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ಸಂಜೆ ತುಮಕೂರಿನಲ್ಲಿ ವರದಿಯಾಗಿದೆ.

 

 

ತುಮಕೂರ್ ತಾಲೂಕು ಬೆಳ್ಳಾವಿ ಹೋಬಳಿಯ ಸೋರೆ ಕುಂಟೆ ಬಳಿಯ ಲಿಂಗದಹಳ್ಳಿ ಗ್ರಾಮದ ಗೋವಿಂದಪ್ಪ ಎನ್ನುವ ವ್ಯಕ್ತಿ ತನ್ನ ಹೆಂಡತಿಯ ಜೊತೆ ಜಗಳಕ್ಕೆ ಇಳಿದಿದ್ದು ಗಂಡ-ಹೆಂಡತಿಯ ನಡುವೆ ಜಗಳ ತಾರಕಕ್ಕೇರಿದೆ.

 

 

 

ಸಂದರ್ಭದಲ್ಲಿ ಗಂಡ-ಹೆಂಡತಿಯ ನಡುವೆ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿದ ಕೂಡಲೇ ಪೊಲೀಸರು ಗ್ರಾಮಕ್ಕೆ ತೆರಳಿ ಆತನನ್ನು ರಕ್ಷಿಸಲು ಹೋಗಿದ್ದಾರೆ ಆದರೆ ಇದೇ ಸಂದರ್ಭದಲ್ಲಿ ಗೋವಿಂದರಾಜು ತನ್ನ ಮನೆಯಲ್ಲಿದ್ದ ಸಿಲಿಂಡರನ್ನು ತೆಗೆದು ಆತ್ಮಹತ್ಯೆಗೆ ಯತ್ನಿಸಲು ಮುಂದಾಗುತ್ತಾನೆ ಆದರೆ ಪೊಲೀಸರು ಕಿಟಕಿಯನ್ನು ಒಡೆದು ಆತನನ್ನು ರಕ್ಷಿಸಲು ಮುಂದಾದ ಕೂಡಲೇ ಸಿದ್ದರಾಜು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಗ್ಯಾಸ್ ಸೋರಿಕೆಯಾದ ಬೆನ್ನಲ್ಲೇ ಗೋವಿಂದರಾಜು ಸಂಪೂರ್ಣ ಸುಟ್ಟು ಗಾಯಗೊಳ್ಳುತ್ತಾನೆ ಇದೇ ಸಂದರ್ಭದಲ್ಲಿ ಆತನನ್ನು ರಕ್ಷಿಸಲು ಮುಂದಾಗಿದ್ದ ಪೊಲೀಸರಿಗೂ ಸಹ ಬೆಂಕಿಯ ಜ್ವಾಲೆ ತಾಕಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ

 

 

 

ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಗೋವಿಂದರಾಜು ಹಾಗೂ ಪೊಲೀಸರನ್ನು ತುಮಕೂರು ಆಸ್ಪತ್ರೆಗೆ ರವಾನಿಸಲಾಯಿತು ಆದರೆ ಗಂಭೀರವಾಗಿ ಗಾಯಗೊಂಡ ಗೋವಿಂದರಾಜು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಆದರೂ ಕೊನೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಇನ್ನು ರಕ್ಷಿಸಲು ಹೋದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗವಿರಂಗಪ್ಪ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲು ನೀಡಲಾಗುತ್ತಿದೆ.

 

 

ಅದೇನೇ ಇರಲಿ ಗಂಡ-ಹೆಂಡತಿಯ ನಡುವೆ ತಾರಕಕ್ಕೇರಿದ ಜಗಳ ಓರ್ವ ಮೃತಪಟ್ಟು ಆತನನ್ನು ರಕ್ಷಿಸಲು ಹೋದ ಪೊಲೀಸರು ಸಹ ಗಾಯಗೊಂಡಿರುವ ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನು ಗಾಯಗೊಂಡಿರುವ ಪೊಲೀಸರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

 

ವರದಿ ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version