ವಿನೂತನವಾಗಿ ಪರಿಸರ ದಿನಾಚರಣೆ ಆಚರಿಸಿದ ಗಂಧದಗುಡಿ ಫೌಂಡೇಶನ್.

 

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತುಮಕೂರಿನ  ಗಂಧದಗುಡಿ ಫೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

 

ಇನ್ನು ಫೌಂಡೇಶನ್ ವತಿಯಿಂದ ವಿನೂತನವಾಗಿ ಕೊರನ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಕರೋನ ವಾರಿಯರ್ಸ್ ಗಳಾದ ವೈದ್ಯರು , ಶುಶ್ರೂಷಕಿಯರು, ಪಾಲಿಕೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರಣ ವಾರಿಯರ್ಸ್ ಗಳಿಗೆ ಸಸಿಗಳನ್ನು ನೀಡುವ ಮೂಲಕ ವಿನೂತನವಾಗಿ ಪರಿಸರ ದಿನಾಚರಣೆಯನ್ನು ಆಚರಿಸುವ ಮೂಲಕ ಎಲ್ಲರಿಗೂ ಗಂಧದಗುಡಿ ಫೌಂಡೇಶನ್ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಡಾ ಸಂಜಯ್ , ಡಾ ಶ್ರೀನಿವಾಸ್ ಡಾ ಹಾರಿಕ ,ಡಾ ಪ್ರವೀಣ್ ಹಾಗೂ ಅಶೋಕ್ ಸೇರಿದಂತೆ ತುಮಕೂರು ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್ ಹಾಗೂ ತಂಡದ ಸದಸ್ಯರಾದ ನಿರಂಜನ್, ಹರೀಶ್, ಕೃಷ್ಣಮೂರ್ತಿ ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version