ವಿಷ್ಣುದಾದಾ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿ ಮಾದರಿಯಾದ ಯುವಕರು

ವಿಷ್ಣುದಾದಾ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿ ಮಾದರಿಯಾದ ಯುವಕರು.

 

ತುಮಕೂರು ನಗರದ ದೇವರಾ ಯಪಟ್ಟಣದಲ್ಲಿರುವ ಶ್ರೀ ಶಾರದಾಂಬ ಟ್ರಸ್ಟ್ ರಿ., ಎಂಬ ವೃದ್ಧಾಶ್ರಮದಲ್ಲಿ ತುಮಕೂರು ನಗರ ಡಾ. ವಿಷ್ಣುಸೇನಾ ವತಿಯಿಂದ ಡಾ. ವಿಷ್ಣುವರ್ಧನ್‌ರವರ ೭೨ನೇ ವರ್ಷದ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸುವುದರೊಂದಿಗೆ ಇತರರಿಗೆ ಮಾದರಿಯಾದರು.

ಈ ಹುಟ್ಟು ಹಬ್ಬದ ಸಂದರ್ಭದಲ್ಲಿ ಆಶ್ರಮದಲ್ಲಿನ ಹಿರಿಯ ನಾಗರೀಕರಿಗೆ ಹಬ್ಬದ ಊಟ, ಆರೋಗ್ಯ ತಪಾಸಣೆ, ಹೊದಿಕೆ, ಬಟ್ಟೆಗಳನ್ನು ತಮ್ಮ ತಮ್ಮ ಸ್ವಂತ ಖರ್ಚಿನಿಂದ ಮಾಡಿಕೊಟ್ಟು, ವಿಷ್ಣುವರ್ಧನ್ ರವರ ಆದರ್ಶವನ್ನು ತಾವು ಪಾಲನೆ ಮಾಡುವುದರೊಂದಿಗೆ ಮಾದರಿಯಾಗಿದ್ದೇವೆಂದು ಜನರಿಗೆ ಈ ಮೂಲಕ ಸಂದೇಶವನ್ನು ರವಾನಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ತುಮಕೂರು ಜಿಲ್ಲಾ ಮಾಜಿ ವಕ್ಫ್ ಬೋರ್ಡ್ ಚೇರಮನ್ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾದ ಇಕ್ಬಾಲ್ ಅಹ್ಮದ್‌ರವರು ತಾವು ಈ ಹುಡುಗರೊಂದಿಗೆ ಸೇರಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಹುಡುಗರ ಜನಪರ ಕಾರ್ಯಗಳು ಅತ್ಯುತ್ತಮವಾಗಿದ್ದು ಇವರುಗಳು ಎಲೆಮರೆ ಕಾಯಿಗಳಿಂತೆ ತಮ್ಮ ಸಾಮಾಜಿಕ ಕಾರ್ಯಗಳನ್ನು ಮಾಡಿ ಕೊಂಡು ಬರುತ್ತಿರುವುದು ಅಭಿನಂದನಾರ್ಹ ಸಂಗತಿಯೆಂದರು.

 

 

ಇನ್ನು ಈ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದ ಬಿಜೆಪಿಯ ಮುಖಂಡ ಹಾಗೂ ಸ್ಪೂರ್ತಿ ಡೆವಲಪರ್‍ಸ್‌ನ ಮಾಲೀಕರಾದ ಎಸ್.ಪಿ.ಚಿದಾನಂದ್‌ರ ವರು ಈ ಹುಟ್ಟುಹಬ್ಬವನ್ನು ಹಿರಿಯ ನಾಗರೀಕರೊಂದಿಗೆ ಹಂಚಿ ಸಂಭ್ರಮಿಸಿರು ವುದು ಅತ್ಯಂತ ಸಂತಸದ ವಿಷಯ ಈ ಹುಡುಗರು ಅತ್ಯಂತ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.

 

 

ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಹಾಗೂ 14ನೇ ವಾರ್ಡ್ ಪಾಲಿಕೆಯ ಆಕಾಂಕ್ಷಿಯಾದ ಸಕ್ಲೈನ್ ಅಹಮ್ಮದ್, ಡಾ. ವಿಷ್ಣು ಸೇನೆಯ ಅಧ್ಯಕ್ಷರಾದ ಕಿರಣ್ ಎಲ್, ಪದಾಧಿಕಾರಿಗಳಾದ ನವೀನ್, ಶಿವರಾಜ್, ಚಿನ್ನತಂಬಿ, ರಾಕೇಶ್, ಮಂಜು, ಮೀಟ್ಯಾನಾಯ್ಕ್, ಅಂಜನ್, ರೋಹಿತ್ ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version