ಮಹರ್ಷಿ ವಾಲ್ಮೀಕಿಯವರ ಸಂದೇಶಗಳು ನಮಗೆ ದಾರಿ ದೀಪವಿದ್ದಂತೆ ಶಾಸಕ ಚಿದಾನಂದ ಗೌಡ

ಮಹರ್ಷಿ ವಾಲ್ಮೀಕಿಯವರ ಸಂದೇಶಗಳು ನಮಗೆ ದಾರಿ ದೀಪವಿದ್ದಂತೆ ಶಾಸಕ ಚಿದಾನಂದ ಗೌಡ

ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಎಂ ಗೌಡರವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ತಮ್ಮ ಗೃಹ ಕಚೇರಿ ಸೇವಾಸದ ದಲ್ಲಿ ಕಾರ್ಯಕರ್ತರಗಳೊಂದಿಗೆ ಹಾಗೂ ತಮ್ಮ ಅಭಿಮಾನಿ ಬಳಗದೊಂದಿಗೆ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಗೌಡ್ರು ಶ್ರೀ ಮಹರ್ಷಿ ವಾಲ್ಮೀಕಿಯವರ ನಮಗೆ ಅನೇಕ ಸಂದೇಶಗಳನ್ನು ಮತ್ತು ನೀತಿಪಾಠಗಳನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ, ಅವರ ಜೀವನ ಹಾಗೂ ಅದ್ವಿತೀಯ ಪಂಡಿತ್ಯವು ಎಲ್ಲರಿಗೂ ಪ್ರೇರಣೆ ನೀಡುತ್ತಿದೆ ಆದ್ದರಿಂದ ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಿ ಉತ್ತಮ ಸಮಾಜ ಕಟ್ಟೋಣ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಮದಲೂರು ಮೂರ್ತಿ ಮೇಸ್ಟ್ರು, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಿಕ್ಕಣ, ಗ್ರಾಮ ಪಂಚಾಯ್ತಿ ಸದಸ್ಯರಾದ ದಾಸರಹಳ್ಳಿ ಈರಣ್ಣ, ಮುದ್ದರಂಗನಹಳ್ಳಿ ಶಿವಣ್ಣ, ಡಿ. ಎಚ್ ಗೌಡ, ಗೋಪಿಕುಂಟೆ ಮೂರ್ತಿ,ಎಸ್.ಸಿ ನಗರ ಘಟಕ ಅಧ್ಯಕ್ಷರಾದ ಹನುಮಂತರಾಯಪ್ಪ, ವಾಜರಹಳ್ಳಿ ಕೃಷ್ಣೇಗೌಡ, ರಮೇಶ್, ಶಿಕ್ಷಕರಾದ ಕುಮಾರ್ ಸರ್, ಮಂಜುನಾಥ್, ಕುಣಿಗಲ್ ಹೇಮರಾಜು, ಶ್ರೀನಿವಾಸ್ ಮೂರ್ತಿ, ಸಿದ್ದಲಿಂಗಸ್ವಾಮಿ, ಶಶಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version