ಉಕ್ರೇನ್ ನಲ್ಲಿ ಸಿಲುಕಿದ ತುಮಕೂರಿನ ಅಕ್ಕ-ತಮ್ಮ, ಮಕ್ಕಳನ್ನ ಶೀಘ್ರ ಕರೆತರಲು ಪೋಷಕರಿಂದ ಸರ್ಕಾರಕ್ಕೆ ಒತ್ತಾಯ.

ಉಕ್ರೇನ್ ನಲ್ಲಿ ಸಿಲುಕಿದ ತುಮಕೂರಿನ ಅಕ್ಕ-ತಮ್ಮ, ಮಕ್ಕಳನ್ನ ಶೀಘ್ರ ಕರೆತರಲು ಪೋಷಕರಿಂದ ಸರ್ಕಾರಕ್ಕೆ ಒತ್ತಾಯ.

 

 

ತುಮಕೂರು: ತುಮಕೂರು ಮೂಲದ ಅಕ್ಕ ಹಾಗೂ ತಮ್ಮ ಉಕ್ರೇನ್​ನಲ್ಲಿ ಸಿಲುಕಿದ್ದು, ಮಕ್ಕಳ ಸ್ಥಿತಿ ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

 

ತುಮಕೂರಿನ ರೂಪಶ್ರೀ ಹಾಗೂ ಸುಮಂತ್ ಉಕ್ರೇನ್​ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

 

 

ಸದ್ಯ ಉಕ್ರೇನ್​ನಲ್ಲಿ ಸಂಕಷ್ಟದ ಪರಿಸ್ಥಿತಿಯಿದ್ದು, ಮಕ್ಕಳನ್ನು ನೆನೆದು ಪೋಷಕರು ಆತಂಕಕ್ಕೊಳಗಾಗಿದ್ದಾರೆ.

 

ಇಂದು ಸಿದ್ದಗಂಗಾ ಮಠದ ಬಸವಬಟ್ಟಣದಲ್ಲಿರುವ ವಿದ್ಯಾರ್ಥಿಗಳ ಮನೆಗೆ ಶಾಸಕ ಜ್ಯೋತಿಗಣೇಶ್ ಭೇಟಿ ನೀಡಿದ್ದು, ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಶಾಸಕರ ಎದುರು ರೂಪಶ್ರೀ ಮತ್ತು ಸುಮಂತ್ ಪೋಷಕರು ಕಣ್ಣೀರು ಹಾಕಿದ್ದು, ಆದಷ್ಟು ಬೇಗ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಸಪ್​ ಕರೆಸಿಕೊಳ್ಳುತ್ತೇವೆ ಎಂದು ಶಾಸಕರು ಧೈರ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version