ತುಮಕೂರು ಜಿಲ್ಲೆ ವಾರ್ತಾಧಿಕಾರಿ ಕೋವಿಡ್ ಗೆ ಬಲಿ

 

ತುಮಕೂರು ಜಿಲ್ಲೆಯ ವಾರ್ತಾ ಇಲಾಖೆಯ ಅಧಿಕಾರಿಯಾಗಿದ್ದ ಮಂಜುನಾಥ್ ರವರು ಕೊರೊನಾದಿಂದ ಇಂದು ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೋರನ ಪಾಸಿಟಿವ್ ಬಂದಿತ್ತು. ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುಣಮುಖರಾದ ಕಾರಣ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಕೊನೆ ಕ್ಷಣದಲ್ಲಿ ಆರೋಗ್ಯ ಏರುಪೇರಾಗಿ ಮಂಜುನಾಥ್ ಅವರು ಮೃತಪಟ್ಟಿದ್ದಾರೆ.

 

ತುಮಕೂರು ಜಿಲ್ಲೆಯಲ್ಲಿ ವಾರ್ತಾಇಲಾಖೆಯ ಅಧಿಕಾರಿಯಾಗಿದ್ದ ಇವರು ಎಲ್ಲ ಇಲಾಖೆಯ ಜೊತೆಗೆ ತುಮಕೂರು ಜಿಲ್ಲೆಯ ಎಲ್ಲಾ ಪತ್ರಕರ್ತರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಇವರ ಅಕಾಲಿಕ ನಿಧನದಿಂದಾಗಿ ತುಮಕೂರು ಜಿಲ್ಲೆ ಒಬ್ಬ ಉತ್ತಮ ಹಾಗೂ ದಕ್ಷ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version