ತುಮಕೂರು ವಿವಿ ಎಡವಟ್ಟು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಾಂಬಾರು ಬಡಿಸಲು ತೆಂಗಿನಕಾಯಿ ಚಿಪ್ಪೇ ಗತಿ …..!
ತುಮಕೂರು_ತುಮಕೂರು ವಿಶ್ವವಿದ್ಯಾನಿಲಯದ ಹೂಗಳತೆಯ ದೂರದಲ್ಲಿರುವ ಹಾಗೂ ವಿವಿ ವ್ಯಾಪ್ತಿಗೆ ಒಳಪಟ್ಟಿರುವ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಸ್ಸಿ ಎಸ್ಟಿ ಹಾಸ್ಟಲ್ನ ವಿದ್ಯಾರ್ಥಿಗಳಿಗೆ ತೆಂಗಿನಕಾಯಿ ಚಿಪ್ಪಿನಲ್ಲಿ ಸಾಂಬಾರು ಬಡಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಊಟ ನೋಡುವಾಗ ವಿದ್ಯಾರ್ಥಿಗಳಿಗೆ ಸೌಟಿನಲ್ಲಿ ಚಟ್ನಿ ಬಡಿಸುವ ಬದಲು ತೆಂಗಿನಕಾಯಿ ಚಿಪ್ಪಿನಲ್ಲಿ ಬಡಿಸಿರುವ ಆರೋಪ ವಿದ್ಯಾರ್ಥಿಗಳಿಂದ ಕೇಳಿಬಂದಿದೆ.
ಈ ಹಾಸ್ಟಲ್ ವಿರುದ್ಧ ಹಲವಾರು ದಿನಗಳಿಂದ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ ಆದರೂ ಹಾಸ್ಟೆಲ್ ವಾರ್ಡನ್ ಧಮಕಿ ಹಾಕಿ ವಿದ್ಯಾರ್ಥಿಗಳ ಬಾಯಿ ಮುಚ್ಚಿಸುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದ್ದು ಎಲ್ಲದಕ್ಕೂ ವಿವಿ ಕಡೆ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.
ನಾಗರಿಕ ಸಮಾಜ ನಾಚುವಂತೆ ಅಮಾನವೀಯವಾಗಿ ನಡೆದಿರುವ ಈ ಘಟನೆಗೆ ಅಸಲೀಕರಣ ಏನು ಎಂಬುದಕ್ಕೆ ತುಮಕೂರು ವಿವಿ ಕುಲಪತಿಗಳೇ, ಉತ್ತರಿಸಬೇಕಿದೆ….??
ಇನ್ನು ಹಾಸ್ಟೆಲ್ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಬರುತಿದ್ದರು ಸಹ ಬಹು ಮುಖ್ಯವಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಲವು ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗುತ್ತಿದೆ ಆದರೆ ವಿದ್ಯಾರ್ಥಿಗಳಿಗೆ ಊಟ ಬಡಿಸಲು ತೆಂಗಿನಕಾಯಿ ಚಿಪ್ಪು ಬಳಸಿ ಸಾರು ಬಡಿಸಿರುವುದರ ಹಿಂದೆ ಇರುವ ಮರ್ಮವಾದರೂ ಏನು ಎಂಬುದನ್ನು ಇನ್ನಾದರೂ ವಿವಿ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ಇನ್ನು ಕೆಲ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿಗಳ ನಡುವೆ ಕೆಲ ವೈ ಮನಸುಗಳು ಇರುವ ವಿದ್ಯಾರ್ಥಿಗಳು ಇಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ತಮ್ಮ ವಿಕೃತ ಮೆರೆಯುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬಂದಿದೆ . ಅದೇನೇ ಇರಲಿ ಇನ್ನಾದರೂ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯ ಅವಶ್ಯಕತೆ ಇದ್ದು ನಂತರ ಸತ್ಯ ಸತ್ಯತೆಯ ನೈಜ ಚಿತ್ರಣ ಹೊರ ಬೀಳಲಿದೆ.
ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಅಧಿಕಾರಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿಗಳು ಇನ್ನಾದರೂ ಇದಕ್ಕೆ ಸ್ಪಷ್ಟೀಕರಣ ನೀಡುವರೇ ಕಾದು ನೋಡಬೇಕಿದೆ.