ತುಮಕೂರು ನಗರ ಶಾಸಕರು ನಗರದ ಎಲ್ಲಾ ವರ್ಗಗಳಿಗೂ ಶಾಸಕರು ಎಂಬುದನ್ನು ಮರೆಯಬಾರದು_ಪಾಲಿಕೆ ಸದಸ್ಯ ಮಂಜುನಾಥ್.

ತುಮಕೂರು ನಗರ ಶಾಸಕರು ನಗರದ ಎಲ್ಲಾ ವರ್ಗಗಳಿಗೂ ಶಾಸಕರು ಎಂಬುದನ್ನು ಮರೆಯಬಾರದು_ಪಾಲಿಕೆ ಸದಸ್ಯ ಮಂಜುನಾಥ್.

ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ರವರು ತುಮಕೂರು ನಗರಕ್ಕೆ ಹಾಗೂ ನಗರದ ಎಲ್ಲಾ ವಾರ್ಡ್ ಗಳಿಗೂ ಶಾಸಕರು ಎಂಬುದನ್ನು ಮರೆಯಬಾರದು ಎಂದು ತುಮಕೂರು ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ತಿಳಿಸಿದ್ದಾರೆ.

 

ತುಮಕೂರು ನಗರದ ಅಭಿವೃದ್ಧಿಗೆ ಸಹಕರಿಸಬೇಕಾದ ಶಾಸಕರು ಅನುದಾನ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದುವರೆಗೂ ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮೈನಾರಿಟಿ ಕೋಟಾದಲ್ಲಿ 20ಲಕ್ಷ ಹಣವನ್ನು ಹಾಕಿದ್ದಾರೆ ಅದನ್ನು ಹೊರತುಪಡಿಸಿದರೆ ಇದುವರೆಗೂ ಯಾವುದೇ ಅನುದಾನವನ್ನು ಬಿಡುಗಡೆಗೊಳಿಸಿಲ್ಲ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸದಸ್ಯರು ಶಾಸಕರ ಗಮನಕ್ಕೆ ತಂದು ಸಾಕಷ್ಟು ಬಾರಿ ಮನವಿಯನ್ನು ಸಹ ಮಾಡಿದ್ದಾರೆ ಆದರೆ ನಮ್ಮ ಮನವಿಗೆ ಶಾಸಕರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದರು.

 

ಇನ್ನು ನಾವು ಪಾಲಿಕೆ ಸದಸ್ಯರಾಗಿ ಮೂರು ವರ್ಷಗಳು ಸಂದಿದ್ದು ಬಿಜೆಪಿ ಸದಸ್ಯರು ಇರುವ ವಾರ್ಡಗಳಲ್ಲಿ ಶಾಸಕರು ಹೆಚ್ಚುಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇರುವ ವಾರ್ಡಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇನ್ನು ಬಿಜೆಪಿ ಸದಸ್ಯರು ಇರುವ ವಾರ್ಡ್ ಗಳಲ್ಲಿ 10ರಿಂದ 11 ಕೋಟಿವರೆಗೂ ಅನುದಾನ ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ ಹಾಗಾಗಿ ಶಾಸಕರು ಯಾವ ಕಾರಣಕ್ಕಾಗಿ ಈ ತರಹದ ಧೋರಣೆ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಇನ್ನು ತುಮಕೂರು ನಗರದ ಶಾಸಕರು ಕೇವಲ ಬಿಜೆಪಿ ಸದಸ್ಯರು ಇರುವ ವಾರ್ಡ್ ಗಳಿಗೆ ಮಾತ್ರ ಶಾಸಕರಲ್ಲ… ತುಮಕೂರು ನಗರಕ್ಕೆ ಹಾಗೂ 35 ವಾರ್ಡ್ಗಳಿಗೂ ಶಾಸಕರು ಎಂಬುದನ್ನು ಮರೆಯಬಾರದು ಎನ್ನುವ ಕಿವಿಮಾತನ್ನು ಹೇಳಿದ್ದಾರೆ .

 

ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಇತರ ಸದಸ್ಯರು ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಮಾಹಿತಿ ನೀಡಲಿದ್ದೇವೆ ಎಂದು ತುಮಕೂರು ಮಹಾನಗರ ಪಾಲಿಕೆಯ ಜೆಡಿಎಸ್ ಸದಸ್ಯ ಮಂಜುನಾಥ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version