ತುಮಕೂರು ಬಂದ್ ಸಂಪೂರ್ಣ ಯಶಸ್ವಿ _ಶಾಸಕ ಜ್ಯೋತಿ ಗಣೇಶ್.

ತುಮಕೂರು ಬಂದ್ ಸಂಪೂರ್ಣ ಯಶಸ್ವಿ _ಶಾಸಕ ಜ್ಯೋತಿ ಗಣೇಶ್.

ಕಳೆದ ಎರಡು ದಿನಗಳ ಹಿಂದೆ ತುಮಕೂರಿನ ಗುಬ್ಬಿ ಗೇಟ್ ಬಳಿ ತುಮಕೂರಿನ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭರ್ಗವ್ ಹಾಗೂ ಮತ್ತೋರ್ವ ಕಾರ್ಯಕರ್ತ ಕಿರಣ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ತುಮಕೂರು ಬಂದ್ ಗೆ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ .ಜ್ಯೋತಿ ಗಣೇಶ್ ತಿಳಿಸಿದ್ದಾರೆ.

 

ತುಮಕೂರಿನ ಹಿಂದೂ ನಾಗರಿಕರು ಹಾಗೂ ಹಿಂದೂ ಕಾರ್ಯಕರ್ತರು ಇಂದಿನ ಬಂದಿಗೆ ಸಂಪೂರ್ಣ ಸಹಕಾರ ನೀಡಿದ್ದು ಇಂದಿನ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ವಿಶ್ವ ಹಿಂದೂ ಪರಿಷತ್ ನ ಬಸವರಾಜ್ ಹಾಗೂ ಬಜರಂಗದಳದ ಉಲ್ಲಾಸ್ ಕಾರಂತ್ ರವರ ಭಾಷಣದ ನಂತರ ತುಮಕೂರು ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿ ಘಟನೆಯನ್ನ ಖಂಡಿಸುತ್ತಾ ಹಿಂದಿನ ತುಮಕೂರಿನ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

 

ಇಂದಿನ ಬಂದ ಸಂಪೂರ್ಣ ಯಶಸ್ಸಿಗೆ ಕಾರಣರಾದ ತುಮಕೂರಿನ ಎಲ್ಲಾ ವರ್ತಕರು ಎಲ್ಲಾ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹೆಚ್ಚಿನದಾಗಿ ಯುವ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಲ್ಲೆಯನ್ನು ಖಂಡಿಸುವ ಮೂಲಕ ಹಿಂದುಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದೇವೆ ಎಂದರು.

 

ಇಂದಿನ ಎಚ್ಚರಿಕೆ ಒಂದು ದಿನಕ್ಕೆ ಸೀಮಿತವಾಗದೆ ಯಾವುದೇ ಸಮಯದಲ್ಲೂ ಹಿಂದೂಗಳ ಮೇಲೆ ಹಲ್ಲೆ ಆದಾಗ ನಮ್ಮ ಶಕ್ತಿ ಏನು ಎಂಬುದನ್ನು ಈ ಮೂಲಕ ತೋರಿಸಲಾಗಿದೆ ಇದರ ಮೂಲಕ ಹಿಂದುಗಳ ಶಕ್ತಿ ಮತ್ತಷ್ಟು ಹೆಚ್ಚು ಮಾಡಿದೆ ಎಂದರೆ ತಪ್ಪಾಗಲಾರದು ಎಂದರು.

 

ತುಮಕೂರು ಬಂದ್ ನ ಸಂಬಂಧ ಸಂಪೂರ್ಣ ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ , ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಶಾಸಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version