ಹರಿಯುತ್ತಿರುವ  ಕೆರೆ ಕೋಡಿ ನೀರಿನಲ್ಲಿ ಯುವಕರ ಹುಚ್ಚಾಟ, ಸ್ವಲ್ಪದರಲ್ಲೇ ಉಳಿದ ಇಬ್ಬರ ಜೀವ.

ಹರಿಯುತ್ತಿರುವ  ಕೆರೆ ಕೋಡಿ ನೀರಿನಲ್ಲಿ ಯುವಕರ ಹುಚ್ಚಾಟ, ಸ್ವಲ್ಪದರಲ್ಲೇ ಉಳಿದ ಇಬ್ಬರ ಜೀವ.

 

ತುಮಕೂರು_ರಾಜ್ಯದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದು ವರುಣಾರ್ಭಟಕ್ಕೆ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

 

 

ತುಮಕೂರು ಜಿಲ್ಲೆಯಲ್ಲೂ ಸಹ ವ್ಯಾಪಕ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿನ ಹಳ್ಳಕೊಳ್ಳ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದು ಸಾಕಷ್ಟು ಬೆಳೆ ಹಾನಿಯಾಗಿದ್ದು , ಜಿಲ್ಲೆಯ ಹಲವು ತಾಲೂಕಿನಲ್ಲಿ ಮನೆಗಳು ಬಿದ್ದು ಸಾಕಷ್ಟು ನಷ್ಟವಾಗಿದೆ.

 

ಇದರ ಬೆನ್ನಲ್ಲೇ ತುಮಕೂರಿನ ಗೂಳೂರು ಕೆರೆ, ತುಂಬಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು ಹರಿಯುತ್ತಿದ್ದ ನೀರಿನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದು ಕೂಡಿ ನೀರಿನಲ್ಲಿ ಆಟವಾಡಲು ಹೋಗಿ ಇಬ್ಬರು ಯುವಕರು ಕೊಚ್ಚಿ ಹೋಗಿದ್ದು ಸ್ವಲ್ಪ ದರಲ್ಲೆ ಇಬ್ಬರು ಯುವಕರು ಬಚಾವಾಗಿರುವ ಘಟನೆ ವರದಿಯಾಗಿದೆ.

 

 

 

ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸಾರ್ವಜನಿಕರು ರಕ್ಷಿಸಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಯುವಕರ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version