ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರನ್ನು ತಬ್ಬಿ, ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರನ್ನು ತಬ್ಬಿ, ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು.

 

ತುಮಕೂರು_ ತುಮಕೂರಿನ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಹಲವು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಎಸ್ ಕೃಷ್ಣಪ್ಪ ರವರು ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

 

 

ಇತ್ತೀಚಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿಯ ಹೊಂದಿದ್ದ ಕೃಷ್ಣಪ್ಪರವರು ಗುಬ್ಬಿ ತಾಲೂಕಿನ ಅಂಕಸಂದ್ರ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದು ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಸಲಾಗಿದ್ದು.

 

 

ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ವರ್ಗಾವಣೆಗೊಂಡ ಶಿಕ್ಷಕರನ್ನ ತಬ್ಬಿ ಬಿಕ್ಕಿ ಬಿಕ್ಕಿ ಅಳುತ್ತ ವರ್ಗಾವಣೆಗೊಂಡ ಶಿಕ್ಷಕ ಕೃಷ್ಣಪ್ಪ ರವರನ್ನ ಕಣ್ಣೀರಿನ ಮೂಲಕ ಬಿಳ್ಕೊಟ್ಟಿದ್ದಾರೆ.

ಇನ್ನು ಶಾಲೆಯಿಂದ ಬೀಳ್ಕೊಡುವ ಸಂಬಂಧದಲ್ಲಿ ಶಿಕ್ಷಕರನ್ನ ನಮ್ಮನ್ನು ಬಿಟ್ಟು ಹೋಗಬೇಡಿ ಸರ್ ಎಂದು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳನ್ನು ನೋಡಿ ವರ್ಗಾವಣೆಗೊಂಡ ಶಿಕ್ಷಕ ಕೃಷ್ಣಪ್ಪ ರವರು ಸಹ ಕಣ್ಣೀರು ಹಾಕಿ ವಿದ್ಯಾರ್ಥಿಗಳ ಪ್ರೀತಿಗೆ ತಾವು ಕೂಡ ಮಗುವಂತೆ ಕಣ್ಣೀರು ಹಾಕಿದ ಘಟನೆಗೆ ಸಾಕ್ಷಿಯಾಗಿದೆ.

 

 

ಇದೆ ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ದುಃಖವನ್ನು ಸಹಿಸಲಾಗದ ಸಹೋದ್ಯೋಗಿ ಶಿಕ್ಷಕರು ಸಹ ಕಣ್ಣೀರು ಹಾಕಿ ವರ್ಗಾವಣೆಗೊಂಡ ಶಿಕ್ಷಕ ಕೃಷ್ಣಪ್ಪರವರನ್ನ ಬಿಳ್ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version