ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರಿಗೆ ತಯಾರಾಗಿದ್ದ ಊಟ ಸೀಜ್ ಮಾಡಿದ ಚುನಾವಣಾ ಆಯೋಗ 

ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರಿಗೆ ತಯಾರಾಗಿದ್ದ ಊಟ ಸೀಜ್ ಮಾಡಿದ ಚುನಾವಣಾ ಆಯೋಗ .

 

 

ತುಮಕೂರು – ಇಂದು ತುಮಕೂರು ಜಿಲ್ಲೆಯ   ಬಿಜೆಪಿ ಅಭ್ಯರ್ಥಿಗಳ  ಪರವಾಗಿ ಪ್ರಧಾನಿ ನರೇಂದ್ರ ಮೋದಿ ರವರಿಂದ ತುಮಕೂರಿನಲ್ಲಿ ಬೃಹತ್ ಸಮಾವೇಶ ಹಾಗೂ ಚುನಾವಣಾ ಪ್ರಚಾರ ಏರ್ಪಟ್ಟಿದ್ದು  ಸಮಾವೇಶದಲ್ಲಿ ಭಾಗಿಯಾಗುವ ಸಲುವಾಗಿ ಕಾರ್ಯಕರ್ತರು ಹಾಗೂ ಮತದಾರರರು ಭಾಗಿಯಾಗಲು ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು.

 

 

ಇದರ ನಡುವೆ ಇಂದು ಮತದಾರರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ  ಊಟದ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದ ಚುನಾವಣಾ ಆಯೋಗದ ಸಿಬ್ಬಂದಿಗಳು ದಿಡೀರನೆ  ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದ ಅಧಿಕಾರಿಗಳಿಂದ ಬೃಹತ್ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಊಟದ ಪೊಟ್ಟಣಗಳನ್ನು ಸೀಜ್  ಘಟನೆ ನಡೆದಿದೆ.

 

 

 

ಸುಮಾರು 30 ಸಾವಿರಕ್ಕೂ ಹೆಚ್ಚು ಊಟದ ಪೋಟ್ಟಣಗಳು ಹಾಗೂ ಸಾವಿರಾರು ನೀರಿನ ಬಾಟಲ್ ಗಳನ್ನು ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version