ಶಿರಾ ನಗರಸಭೆ ಚುನಾವಣೆ ಅಭ್ಯರ್ಥಿ ಸಾವು _ಚುನಾವಣೆ ಮುಂದೂಡಿಕೆ.

ಶಿರಾ ನಗರಸಭೆ ಚುನಾವಣೆ ಅಭ್ಯರ್ಥಿ ಸಾವು _ಚುನಾವಣೆ ಮುಂದೂಡಿಕೆ.

 

ಸಿರಾ_ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಶಿರಾ ನಗರದ 21 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ ಪಾಶ ಹೃದಯಘಾತದಿಂದ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಅಭ್ಯರ್ಥಿ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ 21 ನೇ ವಾರ್ಡಿನ ಚುನಾವಣೆಯನ್ನು ಮುಂದೂಡಲಾಗಿದೆ.

 

 

ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಚಾಂದ್ ಪಾಷ ರವರು ಈ ಬಾರಿಯ ಸಿರಾ ನಗರಸಭೆಯ ಚುನಾವಣೆಗೆ 21ನೇ ವಾರ್ಡಿನಿಂದ ಸ್ಪರ್ಧಿಸಿದ್ದರು ಡಿಸೆಂಬರ್ 27ರಂದು ಮತದಾನ ನಡೆಯಬೇಕಿತ್ತು. ಇನ್ನು ಇವರ ನಿಧನದ ಹಿನ್ನೆಲೆ 21 ನೇ ವಾರ್ಡಿನ ಚುನಾವಣೆಯನ್ನು ಮುಂದೂಡಲಾಗಿದೆ ಉಳಿದಂತೆ ಇತರ ವಾರ್ಡುಗಳ ಮತದಾನ ಪ್ರಕ್ರಿಯೆ ಡಿಸೆಂಬರ್ 27ಕ್ಕೆ ನಡೆಯಲಿದೆ .

 

 

ನಟರಾಜ ಬಿಡಿ ಮಾಲೀಕರಾಗಿದ್ದ ಚಾಂದ್ ಪಾಷ ಅವರು ಅರ್. ರೆಹಾನ್ ಶಿಕ್ಷಣ ಸಂಸ್ಥೆಯ ಮೂಲಕ ಸಾಕಷ್ಟು ಸೇವೆ ಮಾಡುತ್ತಿದ್ದರು.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version