ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರ್ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ.

ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರ್ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ.

 

ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರು ತುಮಕೂರು ಜಿಲ್ಲಾ ಘಟಕದ ವತಿಯಿಂದ ಕೊರಟಗೆರೆ ತಾಲೂಕು ಘಟಕವನ್ನು ನೂತನವಾಗಿ ರಚಿಸಿ ಅದರ ಪದಾಧಿಕಾರಿಗಳನ್ನು ರಾಜ್ಯಧ್ಯಕ್ಷ ಜಮೀರ್ ಕೆ.ಎಂ ಹಾಗೂ ಗೌಸ್ ಪಾಷಾ ರವರ ಮಾರ್ಗದರ್ಶನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಜಮಾತೆ ಮನ್ಸೂರ್ ನ ತುಮಕೂರು ಜಿಲ್ಲಾಧ್ಯಕ್ಷ ಬಶೀರ್ ಅಹಮದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಶೀರ್ ಅಹಮ್ಮದ್ ರವರು ನಮ್ಮ ಸಮುದಾಯದವರು ತೀವ್ರ ಸಂಕಷ್ಟದಲ್ಲಿದ್ದು ಪಿಂಜಾರ ಸಮುದಾಯದವರಿಗೆ ತಮ್ಮ ಸಂಘಟನೆಯಿಂದ ನೊಂದ ಕುಟುಂಬಗಳು ಹಾಗೂ ಸಂಕಷ್ಟದಲ್ಲಿರುವ ಸಮುದಾಯದವರಿಗೆ ನಮ್ಮ ಸಂಘಟನೆಯ ವತಿಯಿಂದ ಒಳ್ಳೆಯದಾಗಲಿ ಎಂಬುದೇ ನಮ್ಮ ಸಂಘಟನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ

 

ಈ ನಿಟ್ಟಿನಲ್ಲಿ ಕೊರಟಗೆರೆ ತಾಲೂಕು ಘಟಕವನ್ನು ರಚಿಸಿದ್ದು ಕೊರಟಗೆರೆ ತಾಲೂಕಿನ ನೂತನ ಅಧ್ಯಕ್ಷರಾಗಿ ಮಾಹಿತಿ ಬಾಬು ರವರನ್ನು ನೇಮಕ ಮಾಡಿದ್ದು ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ವಿಭಾಗಿಯ ಉಪಾಧ್ಯಕ್ಷರಾಗಿ ಹಜರತ್ ಸಾಹೇಬ ನದಾಫ್ ,ಅಬ್ದುಲ್ ಲತೀಫ್ ,ಸಾಹಿಲ್ ಪಾಷಾ, ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version