ಶುಭ ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ: ದಿನದ ಅಂತ್ಯದಲ್ಲಿ ನೆಮ್ಮದಿಯ ಸಮಯ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ. ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವದು. ಮನೆಯ ಜವಾಬ್ದಾರಿಗಳು ಹೆಚ್ಚುವವು.

ವೃಷಭ: ಇಂದು ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿರುವ ಅಂಥವರಿಗೆ ಧನಲಾಭ ಸಾಧ್ಯತೆ. ಆಸ್ತಿ ಪಾಲುದಾರಿಕೆಯಲ್ಲಿ ಹಿರಿಯರ ವಿರೋಧ. ದೇವದರ್ಶನ ಮಾಡುವ ಭಾಗ್ಯ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

ಮಿಥುನ: ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಒಂದೇ ಬಾರಿ ಪಡೆಯುತ್ತೀರಿ. ಉತ್ಕೃಷ್ಟ ಫಲಗಳಿದ್ದಾವೆ, ಕಾರ್ಯ ಸಾಧನೆಯ ದಿನ, ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಶತ್ರುಗಳ ಕಾಟ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವ ಅತೀ ಅಗತ್ಯ.

ಕರ್ಕಾಟಕ: ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ, ಸಹಕಾರ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಸಾಲ ಸಿಗಲಿದೆ. ಆಕಸ್ಮಿಕವಾಗಿ ಎದೆನೋವು ಉಲ್ಬಣ. ಮನೆ ಕಟ್ಟಲು ಅಡಿಪಾಯ ಹಾಕುವಿರಿ. ಮಗಳ ಕುಟುಂಬದಲ್ಲಿ ಕಿರಿ-ಕಿರಿ.

ಸಿಂಹ: ಬಂಧು, ಮಿತ್ರರಲ್ಲಿ ಕಲಹ ಮೂಡುತ್ತದೆ. ಬುಡಕಟ್ಟು ಜನಾಂಗವರಿಗೆ ಸರಕಾರದಿಂದ ಸೌಲಭ್ಯ ಲಭಿಸಲಿದೆ. ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ.

ಕನ್ಯಾ: ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವದು. ಶ್ರಮಿಕವರ್ಗಕ್ಕೆ ಉನ್ನತಿ ಇರುವದು. ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಾದ ಸಂದರ್ಭ ಒದಗಿ ಬಂದೀತು. ಕುಟುಂಬದ ವಾತಾವರಣ ಮಿಶ್ರ ಫಲಿತಾಂಶ.

ತುಲಾ: ಕೂಲಿಕಾರ್ಮಿಕರು ವಲಸೆ ಹೋಗುವ ಸಾಧ್ಯತೆ ಇದೆ. ದೇವತಾ ಕಾರ್ಯಗಳಿಗೆ ಖರ್ಚಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಇಂದು ಯಾರೊಂದಿಗೂ ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಿ.

ವೃಶ್ಚಿಕ: ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಪ್ರೀತಿಯಿಂದ ಜನರನ್ನು ಸೆಳೆಯುವ ಪ್ರಯತ್ನ ಮಾಡಿ. ಸಹೋದರರು ಮತ್ತು ಪ್ರೀತಿ ಪಾತ್ರರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.

ಧನಸ್ಸು: ಇಂದು ನೀವು ಚಿಂತೆಗಳಿಂದ ದೂರವಿದ್ದೀರಿ ಎಂಬುದು ಹೇಳಿಕೆಯಲ್ಲಿ ಎದ್ದುಕಾಣುತ್ತದೆ. ಹೊರಗೆ ಹಣ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ಕೃಷಿ ಉತ್ಪನ್ನ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಧನಲಾಭ.

ಮಕರ: ಶಕ್ತಾನುಸಾರ ಕೆಲಸ ಕಾರ್ಯಗಳನ್ನು ನಿರಾಶರಾಗದೆ, ಸಾಧಿಸಲಿದ್ದೀರಿ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ.ವಿವಿಧ ಸೌಭಾಗ್ಯಪ್ರಾಪ್ತಿ. ಇಂದು ಮನಸ್ಸು ಸೃಜನಶೀಲ ಪ್ರವೃತ್ತಿಗಳತ್ತ ವಾಲುವುದು.

ಕುಂಭ: ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡುತ್ತಾ ಕೂರಬೇಡಿ. ಯಾವ ಕೆಲಸ ಯಾವಾಗ ಮಾಡಬೇಕು ಎಂದು ಪಟ್ಟಿ ಮಾಡಿ. ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಬೇಕು.

ಮೀನ: ಧನಾದಯವಿದ್ದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿ. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರವು ಮನಸ್ಸಿಗೆ ಶಾಂತಿ ನೆಮ್ಮದಿ ಕೊಡಲಿದೆ. ಸುತ್ತಾಟಗಳು ಹೆಚ್ಚಾಗಲಿವೆ. ಇದರಿಂದ ಮುಂದೆ ನಿಮಗೆ ಹೆಚ್ಚು ಅನುಕೂಲ ಆಗಲಿದೆ. ಗೆಲುವು ಅಷ್ಟು ಸುಲಭಕ್ಕೆ ನಿಮ್ಮ ಪಾಲಾಗದು.

 

Leave a Reply

Your email address will not be published. Required fields are marked *

You cannot copy content of this page

error: Content is protected !!