ಜೆಡಿಎಸ್ ನ ಮಂಜುನಾಥ್ ಪರ ಕಾಮಗೆರೆ ಗ್ರಾಮದ ಮುಖಂಡರು ಮತ್ತು ಯುವಕರಿಂದ ಮತಯಾಚನೆ

ಜೆಡಿಎಸ್ ನ ಮಂಜುನಾಥ್ ಪರ ಕಾಮಗೆರೆ ಗ್ರಾಮದ ಮುಖಂಡರು ಮತ್ತು ಯುವಕರಿಂದ ಮತಯಾಚನೆ

ಹನೂರು :- ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಐದಾರು ದಿನಗಳು ಬಾಕಿ ಇರುವುದರಿಂದ ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ ಅನುಪಸ್ಥಿತಿಯಲ್ಲಿ ಕಾಮಗೆರೆ ಗ್ರಾಮದ ಜೆಡಿಎಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಯಜಮಾನರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರುಗಳು ಗ್ರಾಮದ ವಿವಿಧ ಬಡಾವಣೆಗಳಲ್ಲಿ ಮಂಜುನಾಥ್ ರವರು ಕ್ಷೇತ್ರದ್ಯಂತ ತಮ್ಮ ಕೈಲಾದ ಸೇವೆ ಸಹಾಯ ಸಾಮಾಜಿಕ ಸೇವೆಗಳನ್ನು ಮುಂದಿಟ್ಟು ಮನೆ ಮನೆಗಳಿಗೆ ತೆರಳಿ ಜೆಡಿಎಸ್ ಪಕ್ಷದ ಪರ ಮತಯಾಚನೆ ಮಾಡುತ್ತಿದ್ದಾರೆ

 

 

 

 

 

 

 

 

 

 

ಹನೂರು ವಿಧಾನಸಭಾ ಕ್ಷೇತ್ರ ಕರ್ನಾಟಕದಲ್ಲಿಯೇ ಅತಿ ದೊಡ್ಡ ವಿಸ್ತೀರ್ಣ ಹೊಂದಿರುವ ಎರಡನೇ ಕ್ಷೇತ್ರ ಇದಾಗಿದ್ದು ಸುಮಾರು 170 ಕ್ಕೂ ಹೆಚ್ಚು ಕಿಲೋಮೀಟರ್ ವಿಸ್ತೀರ್ಣ ಹೊಂದಿರುವುದರಿಂದ ಚುನಾವಣೆಗೆ ಕೆಲವೇ ಕೆಲವು ದಿನಗಳು ಉಳಿದಿರುವುದರಿಂದ

 

 

 

 

 

 

 

 

ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಹಲವು ಗ್ರಾಮಗಳಲ್ಲಿ ತಾವೇ ತಮ್ಮ ಜೆಡಿಎಸ್ ಪಕ್ಷದ ಮಂಜುನಾಥ್ ಪರ ಮತಯಾಚನೆ ಮಾಡುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ರವರಿಗೆ ಕ್ಷೇತ್ರದ್ಯಂತ ಒಳ್ಳೆ ನಿರೀಕ್ಷೆಯ ಬೆಂಬಲ ಸಿಗುತ್ತಿದ್ದು

 

 

 

 

 

 

 

 

 

ಜೆಡಿಎಸ್ ಪಕ್ಷದ ಮಂಜುನಾಥ್ ಈ ಬಾರಿ ಗೆಲ್ಲುತ್ತಾರೆ ಎಂಬ ಮಾತು ತಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತ ವಲಯದಲ್ಲಿ ಕೇಳಿ ಬರುತ್ತಿದೆ.ಇದೇ ಸಂದರ್ಭದಲ್ಲಿ ಕಾಮಗೆರೆ ಗ್ರಾಮದ ಯುವಕರು ಯಜಮಾನರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

 

ವರದಿ :-ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version