ಸಹಕಾರಿ ರಂಗದಲ್ಲಿ ಕೊಡುಗೆ ಪಿ.ಎಲ್‌ ವೆಂಕಟರಾಮರೆಡ್ಡಿಗೆ ಗೌರವ ಡಾಕ್ಟರೇಟ್‌

 

 

ಬೆಂಗಳೂರು ಸೋಮವಾರ 16: ಸಹಕಾರಿ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿನ್ನಲೆಯಲ್ಲಿ ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪಿ.ಎಲ್‌ ವೆಂಕಟರಾಮರೆಡ್ಡಿ ಅವರಿಗೆ ಅಮೇರಿಕಾದ ಧಾರ್ಮಿಕ ವಿಶ್ವವಿದ್ಯಾಲಯ ಯೋಗ-ಸಂಸ್ಕೃತಂ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

 

ನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವದಲ್ಲಿ ನಂಜಾವಧೂತ ಮಹಾಸ್ವಾಮಿಜಿಗಳು ವಿ2 ಹೋಲ್ಡಿಂಗ್ಸ್‌ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ವರ್ಣಭಾರತಿ ಸಹಕಾರ ಅಧ್ಯಕ್ಷರಾದ ಪಿ ಎಲ್‌ ವೆಂಕಟರಾಮರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದರು.

 

ಈ ಸಂಧರ್ಭದಲ್ಲಿ ಯೋಗ-ಸಂಸ್ಕೃತಂ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಎಸ್‌.ಎನ್‌ ಶ್ರೀರಾಮ್‌, ಉಪ ಕುಲಪತಿಗಳಾದ ಡಾ.ಬಿ.ವಿ.ಕೆ ಶಾಸ್ತ್ರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version