ಕೊಬ್ಬರಿ ಹಾರಕ್ಕೆ ಮುಗಿಬಿದ್ದ ಜನರು, ಸಿಕ್ಕಿದ್ದಷ್ಟು ಕೊಬ್ಬರಿ ಬಾಚಿದ ಅಭಿಮಾನಿಗಳು.

ಕೊಬ್ಬರಿ ಹಾರಕ್ಕೆ ಮುಗಿಬಿದ್ದ ಜನರು, ಸಿಕ್ಕಿದ್ದಷ್ಟು ಕೊಬ್ಬರಿ ಬಾಚಿದ ಅಭಿಮಾನಿಗಳು.

 

 

ತುಮಕೂರು_ತುಮಕೂರು ತಾಲೂಕಿನ ಹೆಬ್ಬುರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ ರವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ರವರಿಗೆ ತಮ್ಮ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಕೊಬ್ಬರಿ ಹಾರ ಹಾಕುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

 

 

 

 

ನಂತರ ಮೆರವಣಿಗೆ ಸಾಗುತ್ತಿದ್ದಾಗ ರಸ್ತೆಯಲ್ಲಿ ನೆರೆದಿದ್ದ ಸಾರ್ವಜನಿಕರು ಕೊಬ್ಬರಿ ಹಾರಕ್ಕೆ ಮುಗಿಬಿದ್ದು ಕೈಗೆ ಸಿಕ್ಕಷ್ಟು ಕೊಬ್ಬರಿಯನ್ನು ಬಾಚಿದ್ದು ಸ್ಥಳೀಯ ಸಾರ್ವಜನಿಕರ ಮೊಬೈಲ್ನಲ್ಲಿ ಸರಿಯಾಗಿದೆ.

 

 

 

 

 

ಕಳೆದ ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ತುಮಕೂರಿನ ಹನುಮಂತಪುರದಲ್ಲಿ ಸಾಗುತ್ತಿದ್ದ ವೇಳೆ ಸ್ಥಳೀಯ ಸಾರ್ವಜನಿಕರು ಸೇಬಿನ ಹಾರಕ್ಕೆ ಮುಗಿಬಿದ್ದಿದ್ದು ಸುದ್ದಿಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version