ಅಡಿಕೆ ನುಂಗಿ ಮಗು ಸಾವು!- ತೀರ್ಥಹಳ್ಳಿಯ ಹೆದ್ದೂರು ಬಳಿ ಘಟನೆ

ಅಡಿಕೆ ನುಂಗಿ ಮಗು ಸಾವು!- ತೀರ್ಥಹಳ್ಳಿಯ ಹೆದ್ದೂರು ಬಳಿ ಘಟನೆ

 

 

ತೀರ್ಥಹಳ್ಳಿ: ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದೂರಿನಲ್ಲಿ ಒಂದು ವರ್ಷ ಒಂದು ತಿಂಗಳ ಮಗುವೊಂದು ಅಡಿಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಧಾರುಣ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಹೆದ್ದೂರು ನಿವಾಸಿಗಳಾದ ಸಂದೇಶ ಹಾಗೂ ಪ್ರಿಯಾಂಕ ಇವರ 1 ವರ್ಷದ ಗಂಡು ಮಗು ಹರಿವಾಣ ತಟ್ಟೆಯಲ್ಲಿದ್ದ ಅಡಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕರೋನಾ ಸಂದರ್ಭದಿಂದ ತನ್ನ ಹೆದ್ದೂರು ಮನೆಯಲ್ಲಿ ಮಗುವನ್ನು ಬಿಟ್ಟಿದ್ದರು.ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಪಡೆದಿತ್ತು ಎನ್ನಲಾಗಿದೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version