ವಿಜಯ ಭಾರತ ಫಲಾಶ್ರುತಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ ಅಧಿಕಾರಿಗಳು 

ವಿಜಯ ಭಾರತ ಫಲಾಶ್ರುತಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ ಅಧಿಕಾರಿಗಳು 

ಹನೂರು :- ತಾಲೂಕಿನ ಮಲೈ ಮಾದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮತ್ತು ಹನೂರು ಮಾರ್ಗ ಮದ್ಯೆ ಕಾಮಗಾರಿ ಪ್ರಗತಿಯಲ್ಲಿರುವ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯು ತುಂಬಾ ವಿಳಂಬದಿಂದ ನಡೆಯುತ್ತಿದ್ದು ಪಕ್ಕದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ರಸ್ತೆಯು ಮಳೆಯಿಂದಾಗಿ ತೀರ ಹದಗೆಟ್ಟಿದ್ದು ವಾಹನ ಚಾಲಕರು ಹಾದುಹೋಗಲು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹರಸಹಾಸ ಪಡುತ್ತಿದ್ದಾರೆ ಇನ್ನು ಈ ಮಾರ್ಗದಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ದರ್ಶನ ಪಡೆಯಲು ಸಾವಿರಾರು ಭಕ್ತಾದಿಗಳು ವಾಹನಗಳಲ್ಲಿ ಅತಿ ಹೆಚ್ಚಾಗಿ ಬರುವುದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

 

 

 

ಐದು ದಿನದ ಹಿಂದಿನ ಫೋಟೋ

ಇಂದಿನ ಫೋಟೋ

 

 

ಇನ್ನೂ ಬೈಕ್ ಸವಾರರಂದು ಎದ್ದು ಬಿದ್ದು ಚಲಿಸುವoತಾಗಿದೆ.ಎಚ್ಚರಿಕೆಯ ನಾಮಫಲಕವನ್ನು ಹಾಕದೆ ಇರುವುದು ರಾತ್ರಿ ಸಮಯದಲ್ಲಿ ಚಲಿಸುವ ವಾಹನಗಳಿಗೆ ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನಮ್ಮ ವಿಜಯ ಭಾರತ ವೇಬ್ಸೈಟ್ ನಲ್ಲಿ ಸುದ್ದಿ ಪ್ರಕಟವಾಗಿತ್ತು ಇದನ್ನು ಗಮನಿಸಿದ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಕಾರ್ಯಾನುಮುಖರಾಗಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version