ಕೇಂದ್ರದಿಂದ 8 ಅಂಶದ ಆರ್ಥಿಕ ಪ್ಯಾಕೇಜ್ ಘೋಷಣೆ; ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಲಾಭ?

 

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಜೂ.28 ಸೋಮವಾರ ಕೆಲವು ನೆರವು ಪರಿಹಾರಗಳನ್ನ ಘೋಷಿಸಿದೆ. ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ ಕೇಂದ್ರ ಹಣಕಾಸು ಸಚಿವಾಲಯ. ಈ ಹಿಂದೆಯೂ ಕೆಲವು ನೆರವು ಪರಿಹಾರಗಳನ್ನ ಘೋಷಿಸಲಾಗಿತ್ತು. ಇಂದು ಮತ್ತಷ್ಟು ಆರ್ಥಿಕ ಪರಿಹಾರಗಳನ್ನು ಘೋಷಿಸಲಾಗುತ್ತಿದೆ ಎಂದರು.

8 ಅಂಶಗಳ ಆರ್ಥಿಕ ನೆರವು ಪರಿಹಾರಗಳನ್ನ ಘೋಷಿಸಿದ ಹಣಕಾಸು ಸಚಿವಾಲಯ:

1. ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿದ ವಲಯಗಳಿಗೆ ಹೆಚ್ಚುವರಿ 1.1 ಲಕ್ಷ ಕೋಟಿ ಸಾಲ

A. ಹೆಲ್ತ್ ಸೆಕ್ಟರ್ ಗೆ 50,000 ಕೋಟಿ

B. ಇತರೆ ವಲಯಗಳಿಗೆ 60,000 ಕೋಟಿ

2. ಆತ್ಮನಿರ್ಭರ ಭಾರತ್ ಪ್ಯಾಕೇಜ್ ನ ಕ್ರೆಡಿಟ್ ಲೈನ್ ಗ್ರಾರಂಟಿ ಸ್ಕೀಮ್ ನಲ್ಲಿ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ

3. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಸಣ್ಣ ಸಾಲಗಾರರಿಗೆ ಸಾಲ ನೀಡಲು ಕ್ರೆಡಿಟ್ ಗ್ಯಾರಂಟಿ ಯೋಜನೆ ಪ್ರಾರಂಭ.

A. 1.25 ಲಕ್ಷ ಸಾಲ ಪಡೆಯಬಹುದು, ಆರ್‍ಬಿಐಗಿಂತ 2 ಪರ್ಸೆಂಟ್ ಕಡಿಮೆ ಬಡ್ಡಿದರದಲ್ಲಿ ಸಾಲ

B. ಸಾಲದ ಅವಧಿ 3 ವರ್ಷ

4. ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಹೊಸ ಯೋಜನೆ- 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ (ಟಿಟಿಎಸ್) ಆರ್ಥಿಕ ಸಹಾಯ ವಿಸ್ತರಣೆ

A. ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ 10 ಲಕ್ಷದವರೆಗೆ ಸಾಲ

B. ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದವರೆಗೆ ಸಾಲ

5. ಪ್ರವಾಸಿ ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ ಮೊದಲ 5 ಲಕ್ಷ ಪ್ರವಾಸಿ ವೀಸಾಗಳು ಸಂಪೂರ್ಣ ಉಚಿತ

6. ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆ ಅವಧಿ ವಿಸ್ತರಣೆ

7. ರೈತರಿಗೆ ಹೆಚ್ಚುವರಿ ಪ್ರೋಟೀನ್ ಆಧಾರಿತ ರಸಗೊಬ್ಬರ ಸಹಾಯಧನ- 15,000 ಕೋಟಿ

8. ಈ ಹಿಂದೆ ಘೋಷಿಸಿದಂತೆ ಪ್ರಧಾನಮಂತ್ರಿ ಆತ್ಮನಿರ್ಭರ ಗರೀಭ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ- ಮೇ ತಿಂಗಳಿಂದ ನವೆಂಬರ್ 2021 ರವರೆಗೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version