ನಾಪತ್ತೆಯಾದ ವ್ಯಕ್ತಿ NDRF ತಂಡದಿಂದಶೋಧ ಕಾರ್ಯ ಆರಂಭ.
ತುಮಕೂರು_ಶನಿವಾರ ತುಮಕೂರಿನಲ್ಲಿ ಸುರಿದ ಭಾರಿ ಮಳೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಪತ್ತೆಗಾಗಿ ಎನ್ ಡಿ ಆರ್ ಎಫ್ ತಂಡದಿಂದ ತುಮಕೂರಿನಲ್ಲಿ ನಾಪತ್ತೆಯಾದ ವ್ಯಕ್ತಿಗಾಗಿ ಪತ್ತೆ ಕಾರ್ಯ ಆರಂಭವಾಗಿದೆ.
ಇನ್ನು ಎನ್ ಡಿ ಆರ್ ಎಫ್ ತಂಡದ ಕ್ಯಾಪ್ಟನ್ ಅಜಯ್ ಕುಮಾರ್ ರವರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು NDRF ತಂಡದ ಸಿಬ್ಬಂದಿಗಳು ಪತ್ತೆ ಕಾರ್ಯ ಆರಂಭಿಸಿದ್ದು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಹ ಎನ್.ಡಿ.ಆರ್ಎಫ್ ತಂಡಕ್ಕೆ ಅಗತ್ಯ ಸಹಾಯ ನೀಡಲು ಸಿದ್ದರಿದ್ದು ಎರಡು ತಂಡದಿಂದ ಜಂಟಿ ಕಾರ್ಯ ಆರಂಭವಾಗಿದ್ದು ಈಗ ನಾಪತ್ತೆಯಾಗಿರುವ ಆಟೋ ಚಾಲಕ ಅಮ್ಜದ್ ಖಾನ್ ರವರ ಪತ್ತೆ ಕಾರ್ಯ ಆರಂಭವಾಗಿದೆ.
ವರದಿ ಮಾರುತಿ ಪ್ರಸಾದ್ ತುಮಕೂರು