ಗಣಪತಿ ವಿಸರ್ಜನೆ ವೇಳೆ ಹೆಜ್ಜೆ ಹಾಕಿದ ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತೆ.

ಗಣಪತಿ ವಿಸರ್ಜನೆ ವೇಳೆ ಹೆಜ್ಜೆ ಹಾಕಿದ ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತೆ.

 

 

ತುಮಕೂರು _ ಗಣಪತಿ ಹಬ್ಬ ಬಂತು ಎಂದರೆ ಎಲ್ಲೆಲ್ಲೂ ಹಬ್ಬ ಸಂಭ್ರಮ ಸಡಗರ ಪ್ರತಿಯೊಬ್ಬರಲ್ಲೂ ಮನೆ ಮಾಡಿರುತ್ತೆ.

 

 

 

 

ಇನ್ನು ದೇಶಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು ಅದರಂತೆ ತುಮಕೂರಿನಲ್ಲೂ ಸಹ ಅತೀ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು ಸಂಪ್ರದಾಯದಂತೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಸಹ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಿದ್ದು.

 

 

 

ವಿಸರ್ಜನೆ ವೇಳೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುದೇಶ್ವರ ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ ರವರು ವಿಸರ್ಜನೆ ವೇಳೆ ನಡೆಯುತಿದ್ದ ಮೆರವಣಿಗೆಯಲ್ಲಿ ಅಧಿಕಾರಿಗಳು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಮಹಿಳಾ ಕಾರ್ಪೊರೇಟರ್ಗಳೊಂದಿಗೆ ತಾವು ಸಹ ಹೆಜ್ಜೆ ಹಾಕುವ ಮೂಲಕ ಎಲ್ಲರ ಹುಬ್ಬಿರುವಂತೆ ಮಾಡಿದ್ದಾರೆ.

 

 

 

 

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಉತ್ತಮ ಪ್ರಶಂಸೆಗೆ ವ್ಯಕ್ತವಾಗಿರುವ ಆಯುಕ್ತರು ಉತ್ತಮ ಆಡಳಿತ ನೀಡುವಲ್ಲಿ ಮುಂದಾಗಿದ್ದು ಪಾಲಿಕೆಯ ಮಹಿಳಾ ಕಾರ್ಪೊರೇಟರ್ ಗಳು ಹಾಗೂ ಅಧಿಕಾರಿಗಳೊಂದಿಗೆ ವಿಸರ್ಜನೆ ವೇಳೆ ಬೇಧ ಭಾವ ಮರೆತು ಎಲ್ಲರೊಂದಿಗೆ ಹೆಜ್ಜೆ ಹಾಕಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರಿಗೂ ಸಹ ಕೆಲಕಾಲ ಅಚ್ಚರಿ ಉಂಟು ಮಾಡಿದ್ದು ಈಗ ಹೆಜ್ಜೆ ಹಾಕಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version