ಟಿಪ್ಪರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು ,ತುಮಕೂರು ನಗರದಲ್ಲಿ ಘಟನೆ.

ಟಿಪ್ಪರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು ,ತುಮಕೂರು ನಗರದಲ್ಲಿ ಘಟನೆ.

 

 

 

ತುಮಕೂರು _ ದ್ವಿಚಕ್ರ ವಾಹನ ಸವಾರನಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕುರು ನಗರದಲ್ಲಿ ನಡೆದಿದೆ.

 

 

 

 

ತುಮಕೂರು ನಗರದ ಸಿರಾ ಗೇಟ್ ಬಳಿಯ ಎಸ್.ಮಾಲ್ ಮುಂಬಾಗದಲ್ಲಿ ಘಟನೆ ನಡೆದಿದೆ.

 

 

ಇನ್ನು ಎಸ್.ಮಾಲ್ ಮುಂಬಾಗ ಇರುವ ಕೊಡಿ ಬಳಿ ರಸ್ತೆ ಕಿರಿದಾಗಿದ್ದು ಇದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು ಸಹ ಇದುವರೆವಿಗೂ ಸೇತುವೆ ಅಗಲೀಕರಣ ಮಾಡದೆ ಇರುವ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

 

 

 

 

ಇನ್ನು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ತುಮಕೂರು ನಗರದ ಶಾಂತಿನಗರ ನಿವಾಸಿ ರಾಜಣ್ಣ (60) ಎಂದು ಗುರುತಿಸಲಾಗಿದೆ.

 

 

 

ಮಾರುಕಟ್ಟೆಗೆ ತರಕಾರಿ ಹೂವು ಹಣ್ಣು ಖರೀದಿಗಾಗಿ ತೆರಳುವ ಮೇಲೆ ಟಿಪ್ಪರ್ ಡಿಕ್ಕಿ ಹೊಡೆದು ತಲೆ ಮೇಲೆ ಹರಿದ ಕಾರಣ ರಾಜಣ್ಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

 

ತುಮಕೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version